Webdunia - Bharat's app for daily news and videos

Install App

ದಿಲ್ವಾಲಾ ಹೊಸ ನಾಯಕ ಸುಮಂತ್ ಫುಲ್‌ಖುಷ್

Webdunia
ಶನಿವಾರ, 31 ಆಗಸ್ಟ್ 2013 (18:19 IST)
PR
ದಿಲ್ವಾಲಾ ಚಿತ್ರದ ಮೂಲಕ ಸುಮಂತ್ ಎಂಬ ಹೊಸ ನಟ ಕನ್ನಡಕ್ಕೆ ಪರಿಚಿತರಾಗುತ್ತಿದೆ. ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರನಾಗಿದ್ದರೂ ದುಡ್ಡಿನಿಂದ ನೆಲೆ ನಿಲ್ಲುವ ಜಾಯಾಮಾನಕ್ಕೆ ಒಗ್ಗಿಕೊಂಡಿಲ್ಲ. ಪ್ರತಿಭೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವುದಾಗಿ ಭರವಸೆಯ ಮಾತನಾಡುತ್ತಾರೆ. ಅನಿಲ್ ಎಂಬ ಪ್ರತಿಭಾವಂತ ನಿರ್ದೇಶಕ ಇವರ ಜೊತೆ ಇರುವುದರಿಂದ ದಿಲ್ವಾಲಾ ಸುಮಂತ್ಗೆ ಗೆಲುವು ತಂದುಕೊಡಲಿದೆ ಎಂಬುದು ಅವರ ಭರವಸೆ.

ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು ಯುವಕರೇ ಚಿತ್ರದ ತುಂಬೆಲ್ಲಾ ಇದ್ದಾರೆ. ಸುಮಂತ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದರೂ ಸ್ಟೈಲಿಶ್ ಆಗಿ ಕಾಣುತ್ತಾರಂತೆ. ಖಳನಟನ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹಾಡೊಂದನ್ನು ರೆಡಿ ಮಾಡಲಾಗಿದ್ದು ಇಡೀ ಚಿತ್ರದಲ್ಲಿ ಲವ್ ಹಾಗೂ ಕಾಮಿಡಿ ಸಮನಾಗಿ ಬೆರೆತಿವೆಯಂತೆ. ಕೊಂಚ ಸಾಹಸ ಕತೆಯೂ ಇರುವುದರಿಂದ ದಿಲ್ವಾಲಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ಸಮಂತ್ ನೀಡುವ ಭರವಸೆ.

ನಾಯಕಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಆಟ ಚಿತ್ರದಲ್ಲಿ ನಟಿಸಿದ್ದರೂ ಅದು ನನ್ನ ಮೊದಲ ಚಿತ್ರ ಆಗಲೇ ಇಲ್ಲ ಎನ್ನುವ ಸಮಂತ್ಗೆ ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯಿದೆ. ದಿಲ್ವಾಲಾ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ. ಆರು ತಿಂಗಳು ತರಬೇತಿ ತೆಗೆದುಕೊಂಡೆ ಕುದುರೆ ಸವಾರಿ ಮಾಡಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಸಮಂತ್.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments