Webdunia - Bharat's app for daily news and videos

Install App

'ದಶಮುಖ'ನಾಗಿ ಕೊನೆಗೂ ಬದಲಾದರೇ ರವಿಚಂದ್ರನ್?

Webdunia
SUJENDRA
ಇತರರ ಚಿತ್ರಗಳಲ್ಲಿ ನಟಿಸುವುದಷ್ಟೇ ನನ್ನ ಕೆಲಸ, ಉಳಿದ ಉಸಾಬರಿ ಬಗ್ಗೆ ನಾನು ಚಿಂತೆ ಮಾಡಲು ಹೋಗುವುದಿಲ್ಲ. ನನಗೆ ಬೇಕಾಗಿರುವುದು ಹಣ. ಹಾಗಾಗಿ ನಟಿಸುತ್ತೇನೆ ಎಂದು ಸದಾ ಹೇಳುತ್ತಾ ಬರುತ್ತಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಬದಲಾಗಿದ್ದಾರೆಯೇ?

ಹೌದು ಎನ್ನಲು ಕಾರಣಗಳಿವೆ. ಅವರೀಗ 'ದಶಮುಖ' ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಎಂದೂ ತಾನು ನಿರ್ದೇಶಿಸಿದ, ತನ್ನದಲ್ಲದ ಚಿತ್ರಗಳ ಪ್ರಚಾರಕ್ಕೆ ಮುಂದಾಗದ ರವಿಚಂದ್ರನ್ ಹೀಗೆ ಮಾಡಲು ಕಾರಣಗಳೇನು? ಬಹುಶಃ ಸಾಲು ಸಾಲು ಚಿತ್ರಗಳ ಸೋಲಿರಬಹುದು ಎಂದು ಹೇಳಲಾಗುತ್ತಿದೆ.

ರವಿಚಂದ್ರನ್ ನಾಯಕರಾಗಿರುವ 'ದಶಮುಖ' ರವಿ ಶ್ರೀವತ್ಸ ನಿರ್ದೇಶನದ ಚಿತ್ರ. ಇಲ್ಲಿ ಅವಿನಾಶ್, ಅನಂತ್ ನಾಗ್, ದೇವರಾಜ್, ರವಿಕಾಳೆ, ಚೇತನ್ ಕುಮಾರ್, ಆಕಾಂಕ್ಷಾ ಸೇರಿದಂತೆ ಹಲವರ ತಾರಾಗಣವಿದೆ. ಸರಿತಾ ಮತ್ತೆ ಕನ್ನಡಕ್ಕೆ ಬರುತ್ತಿರುವುದು ಕೂಡ ಇದೇ ಚಿತ್ರದ ಮೂಲಕ.

ತಾನು ನಿರ್ದೇಶಿಸದ, ನಿರ್ಮಿಸದ, ಕೇವಲ ನಟಿಸಿರುವ ಚಿತ್ರದ ಪ್ರಚಾರ ಮಾಡಲು ರವಿಚಂದ್ರನ್ ಮುಂದಾಗಿರುವುದು ಉತ್ತಮ ಬೆಳವಣಿಗೆ ಅಂತಿದೆ ಚಿತ್ರತಂಡ. ನಿರ್ಮಾಪಕ ಸೂರಪ್ಪ ಬಾಬು ಅವರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕನಸುಗಾರ ಪ್ರಚಾರ ಮಾಡುವ ಪ್ರಚಾರದಿಂದ ಚಿತ್ರಕ್ಕೆ ಖಂಡಿತಾ ಸಹಾಯವಾಗಲಿದೆ ಅನ್ನೋ ದೃಢ ನಂಬಿಕೆಯೂ ಅವರಲ್ಲಿದೆ.

ರವಿಚಂದ್ರನ್ ಪ್ರಚಾರ ಹೇಗೆ ಮಾಡಿದ್ದಾರೆ ಗೊತ್ತಾ? ಮಹಾಶಿವರಾತ್ರಿಯಂದು ಉದಯ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಬರೋಬ್ಬರಿ ಒಂದು ಗಂಟೆಗಳ ಕಾಲ ಸ್ಟುಡಿಯೋದಲ್ಲಿ ಕುಳಿತಿದ್ದಾರೆ. ಚಿತ್ರದ ಬಗ್ಗೆ ಮನಸ್ಸಿನಿಂದ ಮಾತನಾಡಿದ್ದಾರೆ. 'ದಶಮುಖ'ನನ್ನು ನೋಡಿ ಅಂತ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

ಇದೇ ಕಾರಣಕ್ಕೆ ರವಿ ಟೀಕೆ...
ರವಿಚಂದ್ರನ್ ನಟಿಸಿದ ನಂತರ ಆ ಚಿತ್ರದ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ ಎಂದು ಆರೋಪಿಸುವವರು ಹಲವರು. ಈ ಸಾಲಿನ ಇತ್ತೀಚಿನ ಸೇರ್ಪಡೆ ಕೆ. ಮಂಜು. 'ಕಳ್ಳ ಮಳ್ಳ ಸುಳ್ಳ' ಚಿತ್ರಕ್ಕೆ ರವಿಚಂದ್ರನ್ ಪ್ರಚಾರ ಮಾಡುತ್ತಿದ್ದರೆ ಖಂಡಿತಾ ಗೆಲ್ಲುತ್ತಿತ್ತು. ಅವರಿಂದಾಗಿಯೇ ಚಿತ್ರ ದೊಡ್ಡ ಹಿಟ್ ಕಾಣಲಿಲ್ಲ ಎಂದು ಅವರು ಆರೋಪಿಸಿದ್ದರು.

ಆದರೆ ರವಿಚಂದ್ರನ್ ಹೇಳೋದೇ ಬೇರೆ. ಅವರ ಪ್ರಕಾರ, ಚಿತ್ರದಲ್ಲಿ ನಟನೆಯನ್ನು ಹೊರತು ಪಡಿಸಿ ಉಳಿದ ವಿಚಾರಗಳಲ್ಲಿ ಅವರನ್ನು ತೊಡಗಿಸಿಕೊಂಡರೆ ಮಾತ್ರ ಪ್ರಚಾರಕ್ಕೂ ಬರುತ್ತಾರಂತೆ. ಅಲ್ಲದೆ, ತನಗೆ ಚಿತ್ರದ ಬಗ್ಗೆ ಏನೊಂದೂ ಗೊತ್ತಿಲ್ಲದೆ ಪ್ರೇಕ್ಷಕರಿಗೆ ಸುಳ್ಳು ಹೇಳಲು ಬಯಸುವುದಿಲ್ಲ ಅನ್ನೋದು ಅವರ ಇನ್ನೊಂದು ಪ್ರಾಮಾಣಿಕ ಮಾತು.

ಹಾಲಿವುಡ್‌ನ '12 ಆಂಗ್ರಿ ಮೆನ್' ಚಿತ್ರವನ್ನು ಆಧರಿಸಿರುವ 'ದಶಮುಖ'ದಲ್ಲಿ ರವಿಚಂದ್ರನ್ ವಿಭಿನ್ನ ಪಾತ್ರ ಮಾಡಿದ್ದಾರೆ ಎಂಬ ಮಾತುಗಳಿವೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments