Webdunia - Bharat's app for daily news and videos

Install App

ದರ್ಶನ್ ಬಗ್ಗೆ ನಿಖಿತಾ ಹೀಗೆಲ್ಲ ಹೇಳಿದ್ದು ಯಾಕೆ?

Webdunia
PR
ಬೇರೆಯವರಿದ್ರೂ ನನ್ನ ಹೆಸರನ್ನೇ ಯಾಕೆ ದರ್ಶನ್ ಜತೆ ಲಿಂಕ್ ಮಾಡಲಾಯಿತು? ಇಷ್ಟು ಹೇಳುತ್ತಿದ್ದಂತೆ ಅಲರ್ಟ್ ಆದ ನಿಖಿತಾ ಮುಂದಿನ ಮಾತುಗಳಿಗೆ ಬ್ರೇಕ್ ಹಾಕಿದರು. ಹೇಳೋದು ಏನೂ ಇಲ್ಲ, ಎಲ್ಲವೂ ಮುಗಿದು ಹೋಗಿದೆ ಎಂದು ತಡವರಿಸಿದರು. ನಿಜಕ್ಕೂ ನಿಖಿತಾ ಬೇರೇನೋ ಹೇಳಲು ಹೊರಟಿದ್ದರೇ?!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಸಂಬಂಧ ಆರೋಪದ ನಂತರ ತೀರಾ ಅಪರೂಪವಾಗಿದ್ದ ನಿಖಿತಾ ಇದೇ ಮೊದಲ ಬಾರಿಗೆ ಎಂಬಂತೆ ಬೆಂಗಳೂರಿನಲ್ಲೇ ಮಾತಿಗೆ ಸಿಕ್ಕಿದ್ದರು. 'ಗೌರಿ ಪುತ್ರ' ಚಿತ್ರದಲ್ಲಿ ನಟಿಸಲು ಉದ್ಯಾನ ನಗರಿಗೆ ಬಂದಿರುವ ಅವರು, ಗತಿಸಿ ಹೋದ ಸಂಗತಿಗಳನ್ನು ನಿಧಾನವಾಗಿ ಮೆಲುಕು ಹಾಕುತ್ತಿದ್ದರು.

ದರ್ಶನ್ ಜತೆಗಿನ ಸಂಬಂಧ, ಅವರು ಜೈಲು ಸೇರಿದ್ದು ಇವೆಲ್ಲ ವಿವಾದಗಳ ಬಗ್ಗೆ ಈಗ ನೀವು ಏನು ಹೇಳುತ್ತೀರಿ ಎಂದಷ್ಟೇ ಪತ್ರಕರ್ತರು ಅಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಆರಂಭದಲ್ಲಿ ಉತ್ತರಿಸಲು ಹಿಂಜರಿದ ನಿಖಿತಾ, ಎಲ್ಲಾ ಮುಗಿದು ಹೋಗಿದ್ಯಲ್ಲ, ಇನ್ನೇನೂ ಉಳಿದಿಲ್ಲ ಎಂದಷ್ಟೇ ಹೇಳಿದರು.

ಆದರೆ ಒತ್ತಾಯಕ್ಕೆ ಮಣಿದು ಶುರುವಿಟ್ಟುಕೊಂಡರು. ಇತರ ನಾಯಕಿಯರು ಇರುವಾಗ ನನ್ನ ಹೆಸರನ್ನೇ ಯಾಕೆ ದರ್ಶನ್ ಸಂಬಂಧಕ್ಕೆ ಬಳಸಿಕೊಳ್ಳಲಾಯಿತು ಎಂದು ಅರ್ಥವಾಗುತ್ತಿಲ್ಲ ಎಂದರು. ಮುಂದಿನ ಮಾತುಗಳಿಗೆ ಸ್ವಯಂ ಸೆನ್ಸಾರ್ ಹಾಕಿಕೊಂಡು ಅಚ್ಚರಿಗೂ ಕಾರಣರಾದರು. ನಿಜಕ್ಕೂ ಅವರು ಮುಂದೆ ಹೇಳಬೇಕಾಗಿದ್ದ ಮಾತುಗಳೇನು? ಎಷ್ಟೇ ಪ್ರಯತ್ನಿಸಿದರೂ ನಿಖಿತಾರ ಬಾಯಿ ಬಿಡಿಸುವುದು ಯಾರಿಗೂ ಸಾಧ್ಯವಾಗಲಿಲ್ಲ.

ಈಗಂತೂ ಅವರ ಪಾಲಿಗೆ ಎಲ್ಲವೂ ಮುಗಿದು ಹೋದ ಕಥೆ. ನಿಖಿತಾ ಜೀವನವೀಗ ಈ ಹಿಂದಿನ ಖದರ್ ಕಂಡುಕೊಂಡಿದೆ. ಯಾವ ಸಮಸ್ಯೆಗಳೂ ಇಲ್ಲ. ಸಂತೋಷವಾಗಿದ್ದಾರೆ. ಮನೆಯವರ ಬೆಂಬಲ ಆಗಲೂ ಇತ್ತು, ಈಗಲೂ ಇದೆ. ಅದನ್ನು ಯಾವತ್ತೂ ಮರೆಯುವುದಿಲ್ಲವಂತೆ. ಕಷ್ಟಕಾಲದಲ್ಲಿ ಗಟ್ಟಿಯಾಗಿ ಆಸರೆಯಾಗಿದ್ದವರು ಮನೆಯವರು ಎನ್ನುವುದನ್ನು ಮತ್ತೆ ಮತ್ತೆ ಪುನರುಚ್ಛರಿಸಿದರು.

ನಡೆದದ್ದು ನಡೆದು ಹೋಗಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆ ಘಟನೆಯ ನಂತರ ನಾನಂತೂ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೇನೆ. ನನ್ನ ವೃತ್ತಿ ಜೀವನಕ್ಕಂತೂ ಇದರಿಂದ ಸಹಾಯವೇ ಆಗಿದೆ. ಆ ಅಧ್ಯಾಯ ಈಗ ಮುಗಿದು ಹೋಗಿದೆ. ನಾನು ಅದನ್ನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದರು.

ಅದೇನೇ ಇರಲಿ, ಪತಿ-ಪತ್ನಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ನಿಖಿತಾ ನಿಷೇಧಕ್ಕೊಳಗಾದರೂ, ಅದರಿಂದ ಲಾಭವಾಗಿದ್ದೇ ಹೆಚ್ಚು. ವಿವಾದಕ್ಕೂ ಮೊದಲು ನಿಖಿತಾ ತಮಿಳು-ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿರಲಿಲ್ಲ. ಆದರೆ ಈಗ ಅಲ್ಲವರಿಗೆ ಪುರುಸೊತ್ತಿಲ್ಲದಷ್ಟು ಅವಕಾಶಗಳಿವೆ. ಹಾಗಾಗಿ ಬಹಿರಂಗವಾಗಿ ಅಲ್ಲದೇ ಇದ್ದರೂ, ಅಂತರಂಗದಲ್ಲಿ ದರ್ಶನ್‌ಗೆ ನಿಖಿತಾ ಥ್ಯಾಂಕ್ಸ್ ಹೇಳುತ್ತಿರಬಹುದು!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments