ಬೆಂಗಳೂರು: ತ್ರಿವೇಣಿ ಚಿತ್ರಮಂದಿರ ಮತ್ತೆ ಸುದ್ದಿಯಲ್ಲಿದ್ದು, ಇದರ ಆಸ್ತಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಚಿತ್ರಮಂದಿರದಲ್ಲಿ ತಮಗೂ ಪಾಲಿರುವುದರಿಂದ ತ್ರಿವೇಣಿ ಚಿತ್ರಮಂದಿರ ಖರೀದಿಸದಂತೆ ದಕ್ಷಾ ಗೌಡರು ಖ್ಯಾತ ಚಲನಚಿತ್ರ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ತ್ರಿವೇಣಿ ಚಿತ್ರಮಂದಿರದಲ್ಲಿ ತಮಗೂ ಪಾಲಿರುವುದರಿಂದ ಅದನ್ನು ಖರೀದಿಸದಂತೆ ನೋಟಿಸ್ ನೀಡಿದ್ದಾರೆ.
ಕಮಲಹಾಸನ್, ಸುದೀಪ್, ದರ್ಶನ್ ಗಮನಕ್ಕೆ ತರುವುದಕ್ಕಾಗಿ ಈ ನೋಟಿಸ್ ನೀಡಲಾಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜುವಿಗೂ ಕೂಡ ನೋಟಿಸ್ ನೀಡಲಾಗಿದೆ. ದಕ್ಷಾ ಗೌಡ ಅವರ ತಂದೆ ಮತ್ತು ಚಿಕ್ಕಪ್ಪ ಆಸ್ತಿ ಮಾರಾಟ ಮಾಡುತ್ತಿದ್ದು, ದಕ್ಷಾ ಗೌಡ ಅವರಿಗೂ ಆಸ್ತಿಯಲ್ಲಿ ಹಕ್ಕು ಇರುವುದರಿಂದ ನೋಟಿಸ್ ನೀಡಿದ್ದಾರೆ.