Select Your Language

Notifications

webdunia
webdunia
webdunia
webdunia

ತರ್ಲೆ ನನ್ ಮಕ್ಕಳಲ್ಲಿ ಶ್ರೀನಗರ ಕಿಟ್ಟಿ ಎಂಟ್ರಿ !

ತರ್ಲೆ ನನ್ ಮಕ್ಕಳಲ್ಲಿ ಶ್ರೀನಗರ ಕಿಟ್ಟಿ ಎಂಟ್ರಿ !
, ಬುಧವಾರ, 25 ಡಿಸೆಂಬರ್ 2013 (14:41 IST)
PR
PR
1992 ರಲ್ಲಿ ಬಂದಂತಹ'ತರ್ಲೆ ನನ್ ಮಗ'ಚಿತ್ರ ಉಪೇಂದ್ರ ನಿರ್ದೇಶನದಲ್ಲಿ ಹಾಗೂ ಜಗ್ಗೇಶ್ ಅವರ ನಟನೆಯಲ್ಲಿ ತಯಾರಾಗಿತ್ತು. ಇದು ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿತ್ತು. ಈಗ ಅದೇ ಚಿತ್ರ ಸ್ವಲ್ಪ ಹೆಸರು ಬದಲಾವಣೆ ಮಾಡಿಕೊಂಡು ತರ್ಲೆ ನನ್ ಮಕ್ಳು ಆಗಿದೆ. ಈ ಚಿತ್ರದಲ್ಲಿ ಜಗ್ಗೇಶ್ ಮಗ ಯತಿರಾಜ್ ನಟಿಸುತ್ತಿದ್ದಾರೆ. ಇವರ ಜೊತೆ ನಾಗ್ ಶೇಖರ್ ಸಹ ಇದ್ದಾರೆ. ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ಹೇಳ ಬೇಕಾದ ಹೊಸ ಸುದ್ದಿ ಅಂದರೆ, ಜನಪ್ರಿಯ ನಾಯಕ ನಟ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ . ತರ್ಲೆ ನನ್ ಮಕ್ಕಳು'ಐದು ಹಾಡುಗಳ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಉಪೇಂದ್ರ ಹಾಗು ಜಗ್ಗೇಶ್ ಅವರು ಈ ಚಿತ್ರಕ್ಕೆ ತಲಾ ಒಂದು ಹಾಡನ್ನು ಹೇಳುವುದರ ಮೂಲಕ ಚಿತ್ರದ ಆಕರ್ಷಣೆ ಹೆಚ್ಚಿಸಿದ್ದಾರೆ. ಐವರು ನಿರ್ದೇಶಕರು ಬರೆದ ಹಾಡನ್ನು ಐವರು ನಾಯಕರು ಹಾಡು ಹೇಳುತ್ತಿದ್ದಾರೆ. ನಿರ್ದೇಶಕರಾದ ಡಾಕ್ಟರ್ ವಿ ನಾಗೇಂದ್ರಪ್ರಸಾದ್,ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್,ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ,ಜಗ್ಗೇಶ್,ನೆನಪಿರಲಿ ಪ್ರೇಂಕುಮಾರ್,ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಹೊತ್ತು ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ದ್ದಾರೆ ಈ ಚಿತ್ರದ ಮೂಲಕ.

ಗ್ರೀನ್ ಲೈನ್ ಟ್ರಾವೆಲ್ಸ್ ಅಡಿಯಲ್ಲಿ 'ತರ್ಲೆ ನನ್ ಮಕ್ಳು 'ಸೆಟ್ಟೇರಿದೆ. ಸೂರ್ಯವಂಶಿ-ಡೀಜೆ ಸಂಗೀತ , ಜೇರಾಲ್ಡ್ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಯತಿರಾಜ್,ಅಂಜನ ದೇಶ್ಪಾಂಡೆ, ನಾಗಶೇಖರ್,ಶುಭ ಪೂಂಜಾ, ಸೌಜನ್ಯ ನಟಿಸಿದ್ದಾರೆ.

Share this Story:

Follow Webdunia kannada