ಡಿ.8ಕ್ಕೆ ಕಿಚ್ಚ 'ವಿಷ್ಣುವರ್ಧನ' - ಅಭಿಮಾನಿಗಳಲ್ಲಿ ಆತಂಕ
ಬರೋಬ್ಬರಿ ಎಂಟು ತಿಂಗಳ ನಂತರ ಕಿಚ್ಚ ಸುದೀಪ್ ಸಿನಿಮಾವೊಂದು ತೆರೆಗೆ ಬರುತ್ತಿದೆ ಅಂದ ಮೇಲೆ ನಿರೀಕ್ಷೆಗಳು ಬೆಟ್ಟದಷ್ಟಿರುವುದು ಸಹಜ. ಸರಿಯೆಂಬಂತೆ ವಿವಾದಗಳು. ಒಂದೆಡೆ ಕಿಚ್ಚನ ಅಭಿಮಾನಿಗಳು, ಇನ್ನೊಂದೆಡೆ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು. ಒಟ್ಟಾರೆ ಡಿಸೆಂಬರ್ 8ರಂದು ಬಿಡುಗಡೆಯಾಗುತ್ತಿರುವ 'ವಿಷ್ಣುವರ್ಧನ' ಕುತೂಹಲ ಕೆರಳಿಸುವುದರೊಂದಿಗೆ, ಆತಂಕಗಳನ್ನೂ ಹುಟ್ಟಿಸಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಕುತೂಹಲವೇನೋ ಸರಿ, ಆತಂಕ ಯಾಕೆ ಅನ್ನೋ ಪ್ರಶ್ನೆಗೆ ಉತ್ತರವೇನೂ ಹೊಸತಲ್ಲ. ಅದು 'ವಿಷ್ಣುವರ್ಧನ' ಚಿತ್ರದ ಶೀರ್ಷಿಕೆ ವಿವಾದದ ಆರಂಭ. ಭಾರತಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಡುವಿನ ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಶೀತಲ ಸಮರ ತಾರಕಕ್ಕೇರಿದ್ದ ಸಂದರ್ಭ. ಆಗ ತಮ್ಮ ಆರಾಧ್ಯ ದೇವತೆಯ ಪರ ನಿಂತಿದ್ದ ವಿಷ್ಣು ಅಭಿಮಾನಿಗಳು, ದ್ವಾರಕೀಶ್ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಅವಾಚ್ಯವಾಗಿ ಬೈದದ್ದಲ್ಲದೆ, ಶೀರ್ಷಿಕೆ ಬದಲಾಯಿಸದಿದ್ದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಅಂತ ಬೆದರಿಕೆಯನ್ನೂ ಹಾಕಿದ್ದರು.ಸಾಕಷ್ಟು ಪ್ರಹಸನಗಳ ನಂತರ ಶೀರ್ಷಿಕೆ ವಿವಾದ ಗುಟ್ಟಾಗಿ ಬಗೆಹರಿದಿದೆ. ಆದರೂ ಈ ಬಗ್ಗೆ ಭಾರತಿ ಇದುವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಸಹಜವಾಗಿಯೇ ಅಭಿಮಾನಿಗಳಲ್ಲಿ ಏನೋ ಆತಂಕ. ಬದುಕಿದ್ದ ಅಷ್ಟೂ ದಿನವೂ ಚಕ್ರವರ್ತಿಯಂತಿದ್ದ ತಮ್ಮ ದೇವರನ್ನು ಸುದೀಪ್ ಚಿತ್ರದಲ್ಲಿ ಹೇಗೆ ತೋರಿಸಲಾಗಿದೆಯೋ? ಯಾವುದೋ ಮಸಾಲೆ ಕಥೆಯ ಚಿತ್ರಗಳ ಪಾತ್ರಗಳಿಗೆ ವಿಷ್ಣುವರ್ಧನ್ ಎಂಬ ಹೆಸರಿಡಲಾಗಿದೆಯೋ? ಈ ಬಗ್ಗೆ ಯಾಕೆ ಭಾರತಿ ಮಾತನಾಡುತ್ತಿಲ್ಲ ಎಂದೆಲ್ಲ ತಲೆ ಕೆಡಿಸಿಕೊಂಡಿದ್ದಾರೆ.ಮೂಲಗಳ ಪ್ರಕಾರ, 'ವಿಷ್ಣುವರ್ಧನ' ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ವಿಷ್ಣುವರ್ಧನ್. ನಾಯಕಿಯರಲ್ಲೊಬ್ಬರಾದ ಭಾವನಾ ಮೆನನ್ ಅವರ ಪಾತ್ರದ ಹೆಸರು ಭಾರತಿ. ಇನ್ನೊಬ್ಬ ನಾಯಕಿ ಪ್ರಿಯಾಮಣಿಯವರ ಪಾತ್ರದ ವಿವರ ಲಭ್ಯವಿಲ್ಲ. ಇಂತಹ ಸಂಗತಿಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ'ವನ್ನು ನಿರ್ದೇಶಿಸಿರುವುದು ವಿ. ಕುಮಾರ್ ಎಂಬುವವರು.ವಿವಾದಗಳು ಏನೇ ಇರಲಿ, ಚಿತ್ರವಂತೂ ಡಿಸೆಂಬರ್ 8ರ ಗುರುವಾರ ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಸಂಗೀತದ ಹಾಡುಗಳು ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ. 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಸಿದ್ಧತೆ ನಡೆದಿದೆ.ವೆಬ್ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!