Webdunia - Bharat's app for daily news and videos

Install App

'ಟೋನಿ'ಯಾದ ಕಿಟ್ಟಿಗೆ ಜಯತೀರ್ಥ ಹೊಸ ಗೆಟಪ್

Webdunia
SUJENDRA
' ಒಲವೇ ಮಂದಾರ' ಸಿನಿಮಾ ಚೆನ್ನಾಗಿತ್ತು, ಎಲ್ಲರೂ ಮೆಚ್ಚಿಕೊಂಡರು. ಆದರೆ ಚಿತ್ರಮಂದಿರಕ್ಕೆ ಎಲ್ಲೂ ಮುಗಿಬೀಳಲಿಲ್ಲ. ಕಾರಣ, ಕಮರ್ಷಿಯಲ್ ಅಂಶಗಳನ್ನು ಸೇರಿಸಲು ನಿರ್ದೇಶಕ ಜಯತೀರ್ಥ ಅವರಿಗೆ ಸಾಧ್ಯವಾಗದೇ ಇರುವುದು. ಈಗ ಆ ಕೊರತೆಯನ್ನು ನೀಗಿಸುತ್ತಲೇ 'ಟೋನಿ' ಆರಂಭಿಸಿದ್ದಾರೆ. ಶ್ರೀನಗರ ಕಿಟ್ಟಿಗೆ ಹೊಸ ಗೆಟಪ್ ಕೊಟ್ಟಿದ್ದಾರೆ.

ಇತ್ತ ನಾಯಕನಾಗಿ ಒಂದು ಬ್ರೇಕ್ ಪಡೆದುಕೊಳ್ಳಲು ಇನ್ನೂ ವಿಫಲನಾಗಿರುವ ಶ್ರೀನಗರ ಕಿಟ್ಟಿಯಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಜಯತೀರ್ಥರನ್ನು ನಂಬುತ್ತಲೇ ಎರಡನೇ ಬಾರಿ (ಮೊದಲನೇ ಚಿತ್ರ 'ಬಾಲ್‌ಪೆನ್') ನಿರ್ಮಾಪಕರೂ ಆಗಿದ್ದಾರೆ. ಆದರೆ ಕಿಟ್ಟಿ ಒಬ್ಬರೇ ಇದನ್ನು ನಿರ್ಮಿಸುತ್ತಿಲ್ಲ, ಜತೆಗೆ ಗೆಳೆಯ ಇಂದ್ರಕುಮಾರ್ ಕೂಡ ಇದ್ದಾರೆ.

' ಒಲವೇ ಮಂದಾರ'ದಂತೆ ಇದೂ ರಸ್ತೆಯಲ್ಲೇ ಸಾಗುವ ಕಥೆ. ಆದರೆ ಈ ಬಾರಿ ಜಯತೀರ್ಥ ಉತ್ತರ ಭಾರತಕ್ಕೆ ಹೋಗುತ್ತಿಲ್ಲ. ಬದಲಿಗೆ, ಕರ್ನಾಟಕದಲ್ಲೇ ಸುತ್ತಾಡಲಿದ್ದಾರೆ. ಆದರೆ ಹಾಡುಗಳಿಗಾಗಿ ದಕ್ಷಿಣ ಭಾರತದ ಕೆಲವು ಆಕರ್ಷಕ ತಾಣಗಳನ್ನು ನಿರ್ದೇಶಕರು ಆರಿಸಿದ್ದಾರಂತೆ. ಒಟ್ಟು 60 ದಿನಗಳ ಚಿತ್ರೀಕರಣ.

ಕಿಟ್ಟಿಯಂತೂ ಈ ಚಿತ್ರದಲ್ಲಿ ಪಕ್ಕಾ ಮಾಡರ್ನ್ ಯುವಕನಾಗಿರುವುದು ಜಾಹೀರಾತುಗಳಲ್ಲೇ ರುಜುವಾತಾಗಿದೆ. ಸಿನಿಮಾದಲ್ಲೂ ಅವರ ಪಾತ್ರ ಹೀಗೆಯೇ ಸಾಗುತ್ತದೆ. ಇಂದು ಗಳಿಸಿದ್ದು, ಇಂದೇ ಖರ್ಚಾಗಿ ಬಿಡಲಿ ಎಂಬ ಮನೋಭಾವ. ಅದೇ ಕಾರಣದಿಂದ 'ಏಕ್ ದಿನ್ ಕಾ ಸುಲ್ತಾನ್' ಎಂಬ ಅಡಿಬರಹ ಚಿತ್ರಕ್ಕಿದೆ. ನಾಯಕ ಟೋನಿಯನ್ನು ಬದಲಾವಣೆ ಮಾಡುವ ಜವಾಬ್ದಾರಿ ನಾಯಕಿಯದ್ದು. ಈ ಪಾತ್ರವೀಗ ಐಂದ್ರಿತಾ ರೇ ಮಡಿಲಿಗೆ ಬಿದ್ದಿದೆ.

ಆದರೂ ಕಿಟ್ಟಿ ಹೀಗೆ ಸಿಗಾರ್ ಬಾಯಲ್ಲಿಟ್ಟುಕೊಂಡು ಹೀಗೆ ಹೊಗೆ ಬಿಡುತ್ತಿರುವುದು ಯಾಕೆ? ಇದೂ ಜಾಗೃತಿಯ ಯತ್ನ ಎಂದರು ಜಯತೀರ್ಥ.

ದುಬೈ ಕನ್ನಡ ಸಂಘದ ಕಾರ್ಯಕ್ರಮಕ್ಕೆ ತೆರಳಿರುವುದರಿಂದ, ಮುಹೂರ್ತಕ್ಕೆ ನಾಯಕಿ ಐಂದ್ರಿತಾ ಬಂದಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು. ಉಳಿದಂತೆ ರಂಗಭೂಮಿಯ ಕಲಾವಿದರಿಗೇ ನಿರ್ದೇಶಕರು ಮಣೆ ಹಾಕಿರುವುದು ಶರತ್ ಲೋಹಿತಾಶ್ವ, ಸ್ವಯಂವರ ಚಂದ್ರು, ಸುಚೇಂದ್ರ ಪ್ರಸಾದ್, ವೀಣಾ ಸುಂದರ್, ಹರೀಶ್ ರಾಯಪ್ಪ ಮುಂತಾದವರ ಆಯ್ಕೆಯಿಂದ ಸ್ಪಷ್ಟವಾಗಿದೆ. ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರದ್ದು. ಈ ಹಿಂದೆ ಕಿಟ್ಟಿಯ 'ಇಂತಿ ನಿನ್ನ ಪ್ರೀತಿಯ' ಚಿತ್ರಕ್ಕೂ ಸಾಧು ಸಂಗೀತವಿತ್ತು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments