Webdunia - Bharat's app for daily news and videos

Install App

ಜಾಸ್ಮಿನ್.5 ಬರೀ ಕಥೆಯಲ್ಲ... ಸತ್ಯ ಘಟನೆಗಳ ನೈಜಚಿತ್ರಣ

Webdunia
ಮಂಗಳವಾರ, 17 ಡಿಸೆಂಬರ್ 2013 (11:01 IST)
* ಜಿ.ವಿ.ಜಯಶ್ರೀ
PR
ನಿನ್ನೆಗೆ ಒಂದು ವರ್ಷವಾಯಿತು ದೆಹಲಿ ಗ್ಯಾಂಗ್ ರೇಪ್ ನಡೆದು . ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದ ಘಟನೆ ನಡೆದು. ಭಾರತದಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಗೌರವ ಇದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ಸಮಾಜದಲ್ಲಿ ನಡೆದ ಘಟನೆ ಅದರಲ್ಲೂ ದೇಶದ ರಾಜಧಾನಿಯಲ್ಲಿ ನಡೆದ ಘಟನೆ ಅತ್ಯಂತ ಭೀಕರ ಮತ್ತು ಭೀಭತ್ಸ .

ಅಂತಹ ಕೃತ್ಯ ಮಾಡಿದ ಅಪರಾಧಿಗಳು ಈಗ ಜೈಲು ಸೇವೆಯಯನ್ನು ಪಡೆಯುತ್ತಿದ್ದಾರೆ. ಅಲ್ಲದೆ ಅವರಲ್ಲಿ ಒಬ್ಬ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ನಿಜ ಘಟನೆಯನ್ನು ಆಧರಿಸಿದ ಚಿತ್ರ ಈಗ ತೆರೆ ಏರಿದೆ. ಜಾಸ್ಮಿನ್.5 ಹೆಸರಿನ ಈ ಚಿತ್ರ ಈಗಾಗಲೇ ಬಹುತೇಕ ತನ್ನೆಲ್ಲ ಕೆಲಸವನ್ನು ಪೂರ್ಣ ಮಾಡಿದೆ. ಸಿನಿಮಾರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಬಯಸಿದ ಒಂದಷ್ಟು ಆಸಕ್ತ ಮನಗಳು ತಯಾರಿಸಿದ ಚಿತ್ರ ಜಾಸ್ಮಿನ್.5 .ಈ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಕೃಷ್ಣಾ ವಿ . ಮತ್ತು ಸಹಾಯಕ ನಿರ್ದೇಶಕ ರಮೇಶ್ ಸಿ. ಅವರೊಂದಿಗೆ ವೆಬ್ ದುನಿಯಾ ನಡಿಸಿದ ಮಾತು ಕಥೆಯು ಇಲ್ಲಿದೆ..

*ಈ ಚಿತ್ರಕ್ಕೆ ಜಾಸ್ಮಿನ್. 5ಅಂತ ಇದೆಯಲ್ಲ ಅದರರ್ಥ?
ಜಾಸ್ಮಿನ್ ಅಂದ್ರೆ ಮಲ್ಲಿಗೆ ಅನ್ನುವುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಮಲ್ಲಿಗೆಯಂತಹ ಹುಡುಗಿ ಬಾಳು ಐದು ಜನ ಕಾಮಾಂಧರ ಕೈಲಿ ಸಿಕ್ಕು ನಲುಗುತ್ತದೆಯಲ್ಲ ಅದಕ್ಕಾಗಿ ಜಾಸ್ಮಿನ್ ಡಾಟ್ 5ಅಥವಾ ಜಾಸ್ಮಿನ್ ಫುಲ್ ಸ್ಟಾಪ್ 5ಎನ್ನುವ ಅರ್ಥ ಬರುವಂತೆ ಹೆಸರು ಇಡಲಾಗಿದೆ.

*ಇದು ಡೆಲ್ಲಿ ಗ್ಯಾಂಗ್ ರೇಪ್ ಕಥಾನಕವೇ?
- ಹವ್ದು ಇದರಲ್ಲಿ ಶೇ. 70 ರಷ್ಟು ನಾವು ದೆಹಲಿಯ ನೈಜ ಘಟನೆಯನ್ನು ಬಳಸಿಕೊಂಡಿದ್ದರೂ ಸೆ. 30 ರಷ್ಟು ಭಾಗವನ್ನುಕಮರ್ಷಿಯಲ್ ಪಾಯಿಂಟ್ ಗೆ ಆದ್ಯತೆ ನೀಡಿದ್ದೇವೆ.

*ನಿಮ್ಮ ಕಥೆಯಲ್ಲಿ ಏನು ವಿಶೇಷವಿದೆ?
ಸಾಕಷ್ಟಿದೆ. ಮುಖ್ಯವಾಗಿ ಮನುಷ್ಯರ ಕ್ರೌರ್ಯಕ್ಕೆ ಮನುಷ್ಯರಿಂದ ಶಿಕ್ಷೆ ದೊರಕದೆ ಹೋದರು ಸಹ ಅಂತಿಮ ವಾಗಿ ಅವರ ಒಳಗಿರುವ ಆತ್ಮಸಾಕ್ಷಿ ಅವರಿಗೆ ಶಿಕ್ಷೆ ನೀಡುತ್ತದೆ. ಅದನ್ನು ಹೇಳುವ ಉದ್ದೇಶ ನಮ್ಮದು.

* ಅಂದ್ರೆ ಮೆಸೇಜ್ ಇದೆ ಅಂದಗಾಯ್ತು ?
ಹೌದು . ಇದರಲ್ಲಿ ಮೆಸೇಜ್ ಇದೆ. ನಿಮಗೊಂದು ಘಟನೆ ಹೇಳ್ತೀನಿ ಈ ಕಥೆ ಸಿದ್ಧ ಮಾಡಿದ ಸ್ವಲ್ಪ ದಿನಗಳ ಬಳಿಕ ಈ ರೇಪ್ ಪ್ರಮುಖ ಅಪರಾಧಿ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ. ನಿಜವೆಂದರೆ ನಾವು ಆ ಘಟನೆಯನ್ನು ಮೊದಲೇ ಬರೆದಿದ್ದೆವು. ಇದರ ಬಗ್ಗೆ ಹೀಗೂ ಉಂಟೆ ಕಾರ್ಯಕ್ರಮದಲ್ಲೂ ಪ್ರಸಾರ ಆಗಿತ್ತು.

*ಶೂಟಿಂಗ್ ಸಮಯದಲ್ಲಿ ಅನೇಕ ಅಗೋಚರ ಸಂಗತಿಗಳು ನಡೆಯಿತಂತೆ ?
ಖಂಡಿತಾ ಸತ್ಯ ನಮ್ಮ ಟೀಮ್ ಗೆ ಅನೇಕ ಬಗೆ ಅವ್ಯಕ್ತ ಅನುಭವಗಳು ಆಗಿವೆ. ಕೆಲವಕ್ಕೆ ಸಾಕ್ಷಿ ಇರಲ್ವಲ್ಲ . ಹೇಳೋಕೆ ಆಗಲ್ಲ.

* ಚಿತ್ರದ ನಾಯಕ ನಾಯಕರ ಬಗ್ಗೆ ಹೇಳಿ..
ಇಬ್ಬರೂ ಚಿತ್ರರಂಗಕ್ಕೆ ಹೊಸಬರು. ನವ್ಯ ನಾಯಕಿ. ಆಕೆಯ ತಾಯಿ ಸರೋಜಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ.ಮೋಹನ್ ಚಿತ್ರದ ನಾಯಕ ಮತ್ತು ನಿರ್ಮಾಪಕ.

*ಉಳಿದ ಪಾತ್ರ ಪರಿಚಯ ..
ಭಾರತಿ ವಿಷ್ಣು ವರ್ಧನ್ (ಗೆಸ್ಟ್ ರೋಲ್ ) ಗಿರಿಜಾ ಲೋಕೇಶ್, ಸರೋಜಮ್ಮ, ಬಸಪ್ಪ ( ಲವ್ಲಿ ಸ್ಟಾರ್ ಪ್ರೇಂ ಅವರ ತಂದೆ),ಕುಳ್ಳ ಮಂಜ, ಭವ್ಯ, ಹೊನ್ನವಳ್ಳಿ ಕೃಷ್ಣ, ಅವಿನಾಶ್, ಹೇಮಂತ್, ಗೌತಂ ನಾಯ್ಡು , ರಮೇಶ್ ,ಬಾಬು, ಪ್ರಕಾಶ್ .

*ಉಳಿದ ಟೀಮ್ ಬಗ್ಗೆ ಹೇಳಿ..
ಕೊರಿಯಾಗ್ರಫಿ ಮನು ಹರಿ ಕೃಷ್ಣ, ಸಂಗೀತ ಸಂಜೀವ್ ಶ್ರೀ ಹರ್ಷ, ಎಡಿಟಿಂಗ್ ಶ್ರೀಕಾಂತ್

* ಚಿತ್ರದ ಬಿಡುಗಡೆ ಎಂದು ಫಿಕ್ಸ್ ಆಗಿದೆ?
ಜನವರಿ ಎಂಡ್ ಅಥವಾ ಫೆಬ್ರವರಿಯಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ.
ಹೀಗೆ ತಮ್ಮ ಚಿತ್ರದ ಅನೇಕ ಸಂಗತಿಗಳನ್ನು ಮಾತನಾಡಿದರು. ಅತ್ಯಂತ ಮನಸ್ಪರ್ಶಿಯಾದ ಅದಕ್ಕಿಂತಲೂ ಖೇದಕರವಾದ ಸಂಗತಿಯನ್ನು ಪಿಕ್ಚರೈಸ್ ಮಾಡಿ ಸಮಾಜಕ್ಕೆ ಒಂದು ಸಂದೇಶ ಹೇಳಲು ಹೊರಟಿರುವ ಈ ಯುವ ಪ್ರತಿಭೆಗಳಿಗೆ ನಮ್ಮ ಕಡೆಯಿಂದ ಗುಡ್ ಲಕ್!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments