Webdunia - Bharat's app for daily news and videos

Install App

ಚೌಡಯ್ಯ : ತಾತನ ಹೆಸರಲ್ಲಿ ಅಂಬರೀಷ್

Webdunia
PR
' ಇನ್ನು ಸ್ವಲ್ಪ ದಿನ ತಾಳಿ, ಒಳ್ಳೆ ಸುದ್ದಿ ಕೊಡ್ತೀನಿ. ಅದೊಂದು ದೊಡ್ಡ ಪ್ರಾಜೆಕ್ಟ್. ನನಗೊಂದು ಸ್ಪೆಷಲ್ ಸಿನಿಮಾ ಕೂಡಾ..' -ಹೀಗೆ ಕೆಲವು ದಿನಗಳ ಹಿಂದೆಯಷ್ಟೇ ರೆಬೆಲ್ ಸ್ಟಾರ್ ಅಂಬರೀಷ್ ಹೇಳಿಕೊಂಡಿದ್ದರು.

ಆದರೆ ಅದು ಯಾವ ಚಿತ್ರ ? ಯಾರು ನಿರ್ದೇಶಕರು? ಯಾವಾಗ ಚಿತ್ರೀಕರಣ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಂಬರೀಷ್ ಅವರ ನಗು ಹೊರತಾಗಿ ಬೇರೇನೂ ಉತ್ತರ ಸಿಕ್ಕಿರಲಿಲ್ಲ.

ಈಗ ಆ ಎಲ್ಲ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. ಹೌದು. ಅಂಬರೀಷ್ ಹೊಸ ಚಿತ್ರವೊಂದಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರವನ್ನು ನಿರ್ದೇಶಿಸುವವರು ಎಸ್. ನಾರಾಯಣ್. 'ವೀರ ಪರಂಪರೆ' ಮೂಲಕ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಅಂಬಿ ಇದೀಗ ಅದಕ್ಕಿಂತಲೂ ವಿಶೇಷ ಎನಿಸುವಂಥ ಚಿತ್ರ ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬುದು ಇಲ್ಲಿನ ವಿಶೇಷ.

ಎಸ್. ನಾರಾಯಣ್ ಅವರು ಅಂಬರೀಷ್‌ಗಾಗಿಯೇ ಕಥೆ, ಚಿತ್ರಕಥೆ, ಸಂಭಾಷಣೆ ಸಿದ್ಧಪಡಿಸಿ ನಿರ್ದೇಶಿಸಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಚೌಡಯ್ಯ' ಎಂದು ನಾಮಕರಣ ಮಾಡಿದ್ದಾರೆ.

ಈ ಶೀರ್ಷಿಕೆ ಕೇಳಿದಾಕ್ಷಣ ಅಂಬರೀಷ್ ಅವರ ತಾತ ಪೀಟೀಲು ಚೌಡಯ್ಯನವರ ನೆನಪಾಗದೆ ಇರದು. ಆದರೆ ಈ ಚಿತ್ರದಲ್ಲಿ 'ಚೌಡಯ್ಯ' ಎಂಬುದು ಭಿನ್ನ ಪಾತ್ರವೊಂದರ ಹೆಸರಷ್ಟೇ ಆಗಿದೆ. ಪೀಟೀಲು ಚೌಡಯ್ಯ ಅವರಿಗೆ ಸಂಬಂಧಿಸಿದ ಯಾವ ಅಂಶಗಳೂ ಚಿತ್ರದಲ್ಲಿ ಇರುವುದಿಲ್ಲವಂತೆ.

ತಾತನ ಹೆಸರನ್ನಷ್ಟೇ ಮೊಮ್ಮಗನಿಗೆ ಇಟ್ಟು ಚಿತ್ರ ಮಾಡಲು ಹೊರಟಿರುವ ನಾರಾಯಣ್ ಈಗಾಗಲೇ ಚಿತ್ರದ ಸಕಲ ಸಿದ್ಧತೆಗನ್ನೂ ಪೂರೈಸಿದ್ದಾರೆ. ಸದ್ಯಕ್ಕೆ ಇಷ್ಟೇ ಸುದ್ದಿ. ಚಿತ್ರದ ತಾರಾ ಬಳಗದಲ್ಲಿ ಯಾರ್ಯಾರು ಇರುತ್ತಾರೆ ಎಂಬ ಮಾಹಿತಿಯೂ ಸದ್ಯಕ್ಕಿಲ್ಲ.

ಎಲ್ಲವೂ ಅಂದುಕೊಂಡಂತೆ ನಡೆದರೆ 'ಚೌಡಯ್ಯ'ನಿಗೆ ಶೀಘ್ರದಲ್ಲೇ ಮುಹೂರ್ತ ಜರುಗಲಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments