ಚೆಕ್ ಬೌನ್ಸ್ ಪ್ರಕರಣ: ಚಲನಚಿತ್ರ ವಿತರಕ ಪ್ರಸಾದ್ ಬಂಧನ
, ಶನಿವಾರ, 21 ಡಿಸೆಂಬರ್ 2013 (11:39 IST)
ಬೆಂಗಳೂರು: ಚಲನಚಿತ್ರ ವಿತರಕ ಪ್ರಸಾದ್ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಚಿಂಗಾರಿ, ಗಾಡ್ಫಾದರ್ ಚಿತ್ರಗಳ ವಿತರಕ ಪ್ರಸಾದ್ ಅವರನ್ನುಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬಂಧಿಸಿದರು. ಚಂದ್ರ ಚಿತ್ರವನ್ನು ಪ್ರಸಾದ್ ನಿರ್ಮಿಸಿದ್ದರು. ಪೊಲೀಸರು ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಪ್ರಸಾದ್ ಅವರಿಗೆ ಯಾಕೆ ಕೋರ್ಟ್ನಿಂದ ವಾರಂಟ್ ಬಂದಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಪ್ರಸಾದ್ ಶೇರುಮಾರ್ಕೆಟ್ನಲ್ಲಿ ವಹಿವಾಟು ನಡೆಸುತ್ತಿದ್ದರೆಂದು ತಿಳಿದುಬಂದಿದೆ.