Webdunia - Bharat's app for daily news and videos

Install App

ಗಣೇಶ್‌ಗೆ ಹಲ್ಲೆಮಾಡಿಲ್ಲ: ಶಿವರಾಜ್

ಇಳಯರಾಜ
ಸೋಮವಾರ, 9 ಜುಲೈ 2007 (16:07 IST)
ಅಪ್ಪಾಜಿ ಮೇಲೆ ಆಣೆ ಮಾಡಿ ಹೇಳ್ತೀನಿ, ನಾನು ಗಣೇಶ್ ಮೇಲೆ ಹಲ್ಲೆ ಮಾಡಿಲ್ಲ. ನಮ್ಮ ಕುಟುಂಬದವರಾರೂ ಹಲ್ಲೆ ಮಾಡಿಲ್ಲ. ನಮಗೆ ಅಂಥಹ ಬುದ್ಧಿಯನ್ನು ಆ ಭಗವಂತ ಕೊಟ್ಟೇ ಇಲ್ಲ ಹೀಗೆಂದು ಸೇರಿದ್ದ ಲಕ್ಷಾಂತರ ಜನರ ಮುಂದೆ ಹೇಳಿಕೊಂಡವರು ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್.

ಭಾನುವಾರ ಸಂಜೆ ಅರಮನೆ ಮೈದಾನದಲ್ಲಿ ನಡೆದ ಮುಂಗಾರು ಮಳೆ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಗಾರು ಮಳೆಯ ಯಶಸ್ಸಿನ ಹೀರೋ ಗಣೇಶ್ ಮೇಲೆ ಹಲ್ಲೆ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ರಾಜ್ ಕುಟುಂಬ ಗಣೇಶ್ ಮೇಲೆ ಕೈ ಮಾಡಿದೆ ಎಂಬರ್ಥದ ಸುದ್ದಿ ಗಾಂಧಿ ನಗರದಲ್ಲಿ ಹಬ್ಬಿತ್ತು.

ಇದು ಸಂಪೂರ್ಣ ತಪ್ಪು ಸುದ್ದಿ. ನಮ್ಮ ಕುಟುಂಬದ ಏಳಿಗೆಯನ್ನು ಸಹಿಸದ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ದಯವಿಟ್ಟು ಇಂತಹ ಸುದ್ದಿಯನ್ನು ನಂಬೇಡಿ ಎಂದು ಭಾವಪರವಶರಾಗಿ ನುಡಿದರು ಶಿವಣ್ಣ.

ರಾಘವೇಂದ್ರ ರಾಜ್ ಕುಮಾರ್, ಪುನೀತ್ ಹೇಗೆಯೋ ಗಣೇಶ್ ಕೂಡಾ ನನಗೆ ಸಹೋದರನಿದ್ದಂತೆ. ಚಿತ್ರರಂಗವನ್ನು ಒಂದೇ ಕುಟುಂಬದಂತೆ ಕಾಣುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments