Select Your Language

Notifications

webdunia
webdunia
webdunia
webdunia

ಗಣೇಶೋತ್ಸವಕ್ಕೆ ಗೋಲ್ಡನ್ ಗಣೇಶರ ಸಂಕಲ್ಪ

ಗಣೇಶೋತ್ಸವಕ್ಕೆ ಗೋಲ್ಡನ್ ಗಣೇಶರ ಸಂಕಲ್ಪ
MOKSHA
ಕೂಲ್ ಆಗಿ ಉಳಿಯದ ಚಿತ್ರ, ಸಾಲು ಸಾಲು ಸೋಲು, ಗಮನ ಕೊಟ್ಟು ಆಯ್ಕೆ ಮಾಡಿಕೊಳ್ಳದ ಚಿತ್ರಗಳಿಂದ ಇತ್ತೀಚೆಗೆ ಜನಪ್ರಿಯತೆ ಕಳೆದುಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್, ತಾವಿನ್ನು ಸೂಕ್ತ ಹೆಜ್ಜೆ ಇರಿಸುವುದಾಗಿ ಸಿದ್ದಿವಿನಾಯಕನ ಮುಂದೆ ಸಂಕಲ್ಪ ಮಾಡಿದ್ದಾರಂತೆ.

ಹೌದು. ವಿಘ್ನೇಶ್ವರನ ಎದುರು ಮಾಡಿದ ಸಂಕಲ್ಪವನ್ನು ಗಣೇಶ್ ಹೊರಗೆಡವಿದ್ದಾರೆ. ಆ ಪ್ರಕಾರ ಅವರಿನ್ನು ಕಲಾತ್ಮಕ ಹಾಗೂ ಹೊಸ ಅಲೆಯ ಚಿತ್ರದಲ್ಲಿ ಮಾತ್ರ ನಟಿಸುತ್ತಾರಂತೆ. ಸುಮ್ಮನೇ ಯಾವುದೋ ಉದ್ದೇಶ ಇಲ್ಲದೇ ನಿರ್ಮಾಣವಾಗುವ ಚಿತ್ರವನ್ನು ಒಪ್ಪಿಕೊಳ್ಳೊದಿಲ್ಲ ಎಂದು ಸಂಕಲ್ಪ ಮಾಡಿದ್ದಾರಂತೆ. ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಾರೋ ಕಾದು ನೋಡಬೇಕು.

ಅವರು ಇನ್ನೊಂದು ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಅವರಂತ ಪ್ರತಿಭಾವಂತ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಗಣೇಶ್ ಇನ್ನಾದರೂ ಉತ್ತಮ ಚಿತ್ರಗಳತ್ತ ಮನಸ್ಸು ಮಾಡಿ ತಮ್ಮ ವೃತ್ತಿ ಬದುಕಿನ ಗ್ರಾಫ್ ಏರಿಸಲು ಪ್ರಯತ್ನ ಮಾಡಲಿ ಎಂದೇ ಹಾರೈಸೋಣ.

Share this Story:

Follow Webdunia kannada