Webdunia - Bharat's app for daily news and videos

Install App

ಖಡಕ್ ಸಿನಿಮಾ

Webdunia
ಶನಿವಾರ, 31 ಜನವರಿ 2009 (19:27 IST)
ಒಂದು ವರ್ಷದ ನಂತರ ನಿರ್ದೇಶಕ ಜಿ.ಕೆ. ಮುದ್ದುರಾಜ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವ ಚಿತ್ರದ ಹೆಸರು ಖಡಕ್. ಫೆ. 5ರಿಂದ ಚಿತ್ರೀಕರಣ ಆರಂಭ. ಮೈಸೂರಿನ ದೇವರಾಜ್ ಎಂಬವರು ಚಿತ್ರ ನಿರ್ಮಿಸುತ್ತಿದ್ದಾರೆ. ಜಿತೇಶ್ ಮತ್ತು ಪದ್ಮಾ ನಾಯಕ-ನಾಯಕಿ. ಜಿತೇಶ್ ಇನ್ನೂ ಚಿತ್ರರಂಗಕ್ಕೆ ಹೊಸ ಮುಖ. ಆದರೆ ನಾಯಕಿ ಪದ್ಮಾ ಇನ್ನಷ್ಟೇ ತೆರೆ ಕಾಣಬೇಕಿರುವ ಕೋಲ್ಮಿಂಚು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಸಾಹಸ ಹಾಗೂ ಸೆಂಟಿಮೆಂಟ್ ಪ್ರಧಾನ ಪಾತ್ರ ವಹಿಸುತ್ತವೆ ಎನ್ನುತ್ತಾರೆ ನಿರ್ದೇಶಕ ಮುದ್ದುರಾಜ್. ಶುಕ್ಲಾಂಬರಧರಂ ಚಿತ್ರಕ್ಕೆ ಸಂಗೀತ ನೀಡಿದ್ದ ಚಂದ್ರಕಾಂತ್ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ರಾಂನಾರಾಯಣ್ ಅವರು ಹಾಡುಗಳನ್ನು ಬರೆದಿದ್ದಾರೆ. ಚಿಕ್ಕಪೇಟೆ ಸಾಚಾಗಳು ಚಿತ್ರಕ್ಕೆ ಕ್ಯಾಮರಾ ಹಿಡಿದಿರುವ ಗಣೇಶ್ ಛಾಯಾಗ್ರಾಹಣದದ ಜವಾಬ್ದಾರಿ ಹೊತ್ತಿದ್ದಾರೆ.

ಮುದ್ದುರಾಜ್ ನಿರ್ದೇಶಿಸಿದ ಇತ್ತೀಚಿನ ಕೊನೆಯ ಚಿತ್ರವೆಂದರೆ ವಿನೋದ್ ರಾಜ್ ಅಭಿನಯದ ಶುಕ್ರ. ಆದರೆ ಚಿತ್ರ ಮಾತ್ರ ಗೆಲ್ಲಲಿಲ್ಲ. ಅದಕ್ಕಾಗಿ ಈ ಬಾರಿ ಗೆಲ್ಲಲೇ ಬೇಕೆಂದು ಉತ್ತಮ ಕಥೆ ಸಿದ್ಧಪಡಿಸಿಕೊಂಡು ಬಂದಿದ್ದಾರಂತೆ. ನಿಧಾನವಾದರೂ ಚಿಂತಿಲ್ಲ. ಉತ್ತಮ ಚಿತ್ರ ನೀಡಬೇಕು ಎಂಬುದೇ ನನ್ನ ಉದ್ದೇಶ ಎನ್ನುತ್ತಾರೆ ಅವರು. ಈ ಹೊಸ ಚಿತ್ರ ಇವರ ನಿರ್ದೇಶನದ 36ನೇ ಚಿತ್ರ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments