Select Your Language

Notifications

webdunia
webdunia
webdunia
webdunia

ಖಡಕ್ ಸಿನಿಮಾ

ಖಡಕ್ ಸಿನಿಮಾ
ಬೆಂಗಳೂರು , ಶನಿವಾರ, 31 ಜನವರಿ 2009 (19:27 IST)
ಒಂದು ವರ್ಷದ ನಂತರ ನಿರ್ದೇಶಕ ಜಿ.ಕೆ. ಮುದ್ದುರಾಜ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವ ಚಿತ್ರದ ಹೆಸರು ಖಡಕ್. ಫೆ. 5ರಿಂದ ಚಿತ್ರೀಕರಣ ಆರಂಭ. ಮೈಸೂರಿನ ದೇವರಾಜ್ ಎಂಬವರು ಚಿತ್ರ ನಿರ್ಮಿಸುತ್ತಿದ್ದಾರೆ. ಜಿತೇಶ್ ಮತ್ತು ಪದ್ಮಾ ನಾಯಕ-ನಾಯಕಿ. ಜಿತೇಶ್ ಇನ್ನೂ ಚಿತ್ರರಂಗಕ್ಕೆ ಹೊಸ ಮುಖ. ಆದರೆ ನಾಯಕಿ ಪದ್ಮಾ ಇನ್ನಷ್ಟೇ ತೆರೆ ಕಾಣಬೇಕಿರುವ ಕೋಲ್ಮಿಂಚು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಸಾಹಸ ಹಾಗೂ ಸೆಂಟಿಮೆಂಟ್ ಪ್ರಧಾನ ಪಾತ್ರ ವಹಿಸುತ್ತವೆ ಎನ್ನುತ್ತಾರೆ ನಿರ್ದೇಶಕ ಮುದ್ದುರಾಜ್. ಶುಕ್ಲಾಂಬರಧರಂ ಚಿತ್ರಕ್ಕೆ ಸಂಗೀತ ನೀಡಿದ್ದ ಚಂದ್ರಕಾಂತ್ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ರಾಂನಾರಾಯಣ್ ಅವರು ಹಾಡುಗಳನ್ನು ಬರೆದಿದ್ದಾರೆ. ಚಿಕ್ಕಪೇಟೆ ಸಾಚಾಗಳು ಚಿತ್ರಕ್ಕೆ ಕ್ಯಾಮರಾ ಹಿಡಿದಿರುವ ಗಣೇಶ್ ಛಾಯಾಗ್ರಾಹಣದದ ಜವಾಬ್ದಾರಿ ಹೊತ್ತಿದ್ದಾರೆ.

ಮುದ್ದುರಾಜ್ ನಿರ್ದೇಶಿಸಿದ ಇತ್ತೀಚಿನ ಕೊನೆಯ ಚಿತ್ರವೆಂದರೆ ವಿನೋದ್ ರಾಜ್ ಅಭಿನಯದ ಶುಕ್ರ. ಆದರೆ ಚಿತ್ರ ಮಾತ್ರ ಗೆಲ್ಲಲಿಲ್ಲ. ಅದಕ್ಕಾಗಿ ಈ ಬಾರಿ ಗೆಲ್ಲಲೇ ಬೇಕೆಂದು ಉತ್ತಮ ಕಥೆ ಸಿದ್ಧಪಡಿಸಿಕೊಂಡು ಬಂದಿದ್ದಾರಂತೆ. ನಿಧಾನವಾದರೂ ಚಿಂತಿಲ್ಲ. ಉತ್ತಮ ಚಿತ್ರ ನೀಡಬೇಕು ಎಂಬುದೇ ನನ್ನ ಉದ್ದೇಶ ಎನ್ನುತ್ತಾರೆ ಅವರು. ಈ ಹೊಸ ಚಿತ್ರ ಇವರ ನಿರ್ದೇಶನದ 36ನೇ ಚಿತ್ರ.

Share this Story:

Follow Webdunia kannada