ರಜನಿಕಾಂತ್ ನ ಬಹು ನಿರೀಕ್ಷಿತ ಚಿತ್ರ ಕೊಚ್ಚಾಡಿಯನ್ ಮೇ ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಕಂಡುಬಂದಿದೆ. ಏನೇ ಆದರೂ ಸಹ ಮೂಲಗಳ ಪ್ರಕಾರ ಚಲನಚಿತ್ರ ತಯಾರಕರಿಗೆ ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ಆಸಕ್ತಿಯಿರಲಿಲ್ಲ ಎನ್ನುವ ಸುದ್ದಿ ಹೊರ ಬಿದ್ದಿದೆ .
ಬಾಸ್ ಮತ್ತು ಸುದೀಪ್ 73 ಶಾಂತಿ ನಿವಾಸ - ಬಿಡುಗಡೆ ಸಮಯಕ್ಕೆ ಸರಿಯಾಗಿ ರಜನಿ ಅವರ ಶಿವಾಜಿ ಬಿಡುಗಡೆ ಆಗಿತ್ತು. ಈ ಎರಡು ಕನ್ನಡ ಚಿತ್ರಗಳು ಗೆಲ್ಲಲು ಸೆಣಸಾಡಿದ್ದರು . ಆಗ ಸುದೀಪ್ ಚಿತ್ರ ನಿರೀಕ್ಷಿಸಿದಂತೆ ಯಶಸ್ಸು ಪಡೆಯಲಿಲ್ಲ , ಆದರೆ ರಜನಿ ಚಿತ್ರವು ಬಾಕ್ಸಾಫೀಸಲ್ಲಿ ದಾಖಲೆ ಬರೆಯಿತು.
PR
ಇನ್ನು ಕೊಚ್ಚಾಡಿಯನ್ ಬಿಡುಗಡೆಯ ವಿಷಯಕ್ಕೆ ಬರುವುದಾದರೆ ಈ ಚಿತ್ರ ಬಿಡುಗಡೆಯ ದಿನಾಂಕ ಮುಂದಾಗುತ್ತಲೇ ಇದೆ. ಇದರಿಂದ ಸುದೀಪ್ ಅವರ ಹೊಸ ಚಿತ್ರ ಮಾಣಿಕ್ಯದ ಬಿಡುಗಡೆ ಸಹ ಮುಂದೂಡುತ್ತಲೇ ಬಂದಿದೆ.
ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಕೊಚ್ಚಾಡಿಯನ್ ಮತ್ತು ಮಾಣಿಕ್ಯ ಬಿಡುಗಡೆ ಆಗುವ ಸಾಧ್ಯತೆ ಇದ್ದು ಆಗ ಮಾಣಿಕ್ಯ ಮತ್ತೊಮ್ಮೆ ತೀವ್ರ ಸ್ಪರ್ಧೆ ಎದುರಿಸುವ ಆತಂಕದ ವಾತಾವರ ಉಂಟಾಗಿದೆ . ಬೆಂಗಳೂರು ತಮಿಳು ಎರಡನೇ ಅತಿದೊಡ್ಡ ಮಾರುಕಟ್ಟೆ. ಆದ್ದರಿಂದ ರಜನಿಕಾಂತ್ ಚಿತ್ರ ಬಿಡುಗಡೆ ಯಿಂದ ಸುದೀಪ್ ಚಲನಚಿತ್ರ ಹೆಚ್ಚಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ .