ಕೆಲಸ ಪೂರೈಸಿತು ಪವನ್ ಪ್ರೀತಿ ಗೀತಿ ಇತ್ಯಾದಿ
, ಶನಿವಾರ, 4 ಜನವರಿ 2014 (10:32 IST)
ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕ ಪವನ್ ವಡೆಯರ್. ಅವರು ಈಗ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಚೊಚ್ಚಿಲ ಚಿತ್ರ ಪ್ರೀತಿ ಗೀತಿ ಇತ್ಯಾದಿ ಯನ್ನು ನಿರ್ದೆಶಿಸಿರುವವರು ವೀರೇಂದ್ರ. ಇದು ವೀರೇಂದ್ರ ಅವರ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರವಾಗಿದೆ,ಈ ಚಿತ್ರ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಅದು ಎರಡು ತಿಂಗಳ ಬಳಿಕ ಬಿಡುಗಡೆಯ ಭಾಗ್ಯ ಕಾಣಲಿದೆ. ಮೈಸೂರು, ತೀರ್ಥಹಳ್ಳಿ , ಬೆಳಗಾಂ , ಮತ್ತು ಬೆಂಗಳೂರಿನಲ್ಲಿರುವ ಅತ್ಯಂತ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆಚಿ ತ್ರವನ್ನು. ಈ ಚಿತ್ರದ ಕೊನೆಯ ದಿನದ ಶೂಟಿಂಗ್ ಮಾಡುವ ಸ್ಥಳಕ್ಕೆ ಸಿನಿಮಾ ಸೆಲೆಬ್ರಿಟಿಗಳಾದ ಯೋಗರಾಜ್ ಭಟ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರಂತೆ. ಈ ಚಿತ್ರದಲ್ಲಿ ಪವನ್ ವಡೆಯರ್ ಬಾರ್ ಓನರ್ ಆಗಿ ನಟಿಸಿದ್ದಾರೆ. ಈ ನಟ/ ನಿರ್ದೇಶಕ ಪವನ್ ವಡೆಯರ್ ಅವರಿಗೆ ನಟನೆ ಹೊಸದಲ್ಲ. ಅವರು ರಂಗಭೂಮಿ ಕಲಾವಿದರಾಗಿದ್ದು ಈಗಾಗಲೇ ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.