Select Your Language

Notifications

webdunia
webdunia
webdunia
webdunia

ಕೃಷ್ಣಕುಮಾರ್,ಅನುಪ್ರಭಾಕರ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ಅರ್ಜಿ

ಕೃಷ್ಣಕುಮಾರ್,ಅನುಪ್ರಭಾಕರ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ಅರ್ಜಿ
ಬೆಂಗಳೂರು , ಬುಧವಾರ, 29 ಜನವರಿ 2014 (18:19 IST)
PR
PR
ಚಿತ್ರನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಮತ್ತು ನಟಿ ಅನುಪ್ರಭಾಕರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. . 2002ರಲ್ಲಿ ಜಯಂತಿ ಪುತ್ರ ಕೃಷ್ಣ ಕುಮಾರ್ ಜತೆ ವಿವಾಹವಾಗಿದ್ದ ಅನುಪ್ರಭಾಕರ್‌ ಅವರಿಗೆ ಜೀವನಾಂಶವಾಗಿ ಒಂದು ಕೋಟಿ ಕೊಡಲು ಕೃಷ್ಣ ಕುಮಾರ್ ಒಪ್ಪಿದ್ದಾರೆ. ಒಂದು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಕುಟುಂಬದಲ್ಲಿ ಸಾಮರಸ್ಯವಿಲ್ಲದಿದ್ದರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೃಷ್ಣಕುಮಾರ್ ಅವರನ್ನು ವಿವಾಹವಾದ ನಂತರ ಜಯಂತಿ ಮತ್ತು ಅನುಪ್ರಭಾಕರ್ ಸಾಕಷ್ಟು ಅನ್ಯೋನ್ಯವಾಗಿದ್ದರು.

ಜಯಂತಿಯವರ ಜತೆ ಎಲ್ಲ ಸಮಾರಂಭಗಳಲ್ಲಿ ಅನು ಪ್ರಭಾಕರ್ ಕಾಣಿಸಿಕೊಳ್ಳುತ್ತಿದ್ದರು. ಹಿಂದೂ ವಿವಾಹ ಕಾಯ್ದೆ 13(ಬಿ) ಅಡಿ ಇಬ್ಬರೂ ಅರ್ಜಿ ಸಲ್ಲಿಸಿದ್ದ ಜೀವನಾಂಶವಾಗಿ ಒಂದು ಕೋಟಿ ರೂ. ಕೊಡಲು ಕೃಷ್ಣಕುಮಾರ್ ಒಪ್ಪಿದ್ದಾರೆ.

Share this Story:

Follow Webdunia kannada