Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ಎಲ್ಲಿಯೂ ಹೋಗಿಲ್ಲವಂತೆ ಹರಿಪ್ರಿಯ.. !ಹಾಗಾದ್ರೆ ಅವರಿಷ್ಟು ದಿನ ಎಲ್ಲಿದ್ದರು ?

ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ಎಲ್ಲಿಯೂ ಹೋಗಿಲ್ಲವಂತೆ ಹರಿಪ್ರಿಯ.. !ಹಾಗಾದ್ರೆ ಅವರಿಷ್ಟು ದಿನ ಎಲ್ಲಿದ್ದರು ?
, ಗುರುವಾರ, 2 ಜನವರಿ 2014 (12:29 IST)
PR
ಎಷ್ಟೇ ಪ್ರಯತ್ನ ಪಟ್ಟರು ಗೆಲುವು ಹೆಚ್ಚೇ ಮರೀಚಿಕೆ ಆಗಿದೆ ನಟ ಶ್ರೀ ಮುರಳಿಗೆ. ಅವರ ಎಲ್ಲ ಪ್ರಯತ್ನಗಳು, ಹೊಸ ಗೆತಪ್ಪುಗಳು ಮತ್ತು ಹೆಸರು ಬದಲಾವಣೆ ಯಾವುದೇ ರೀತಿಯ ಪ್ರಯೋಜನ ನೀಡಿಲ್ಲ. ಆದರೂ ಮುರಳಿ ತಮ್ಮ ಪ್ರಯತ್ನ ನಿಲ್ಲಿಸಿಲ್ಲ. ಅವರ ಕಾಆತಕ್ಕೆ ಎಂದು ವಿಶ್ರಾಂತಿ ನೀಡಿಲ್ಲ. ಅವರ ಹೊಸ ಚಿತ್ರ ಉಗ್ರ. ಅವರ ಪ್ರಕಾರ ಈ ಚಿತ್ರ ಅವರ ತಾರ ಬದುಕಿನ ಎರಡನೇ ಇನ್ನಿಂಗ್ಸ್. ಉಗ್ರಂ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ಮಿಸುತ್ತಿದ್ದಾರೆ.

ಈ ಚಿತ್ರ ಭೂಗತ ಜಗತ್ತಿನ ಕಥೆಯನ್ನು ಹೊಂದಿದೆ. ಸಾಜ ಲೀಲಾ ಭನ್ಸಾಲಿ ಅವರ ಚಿತ್ರ ರಾಮ್ ಲೀಲಾದ ಛಾಯಾಗ್ರಾಹಕ ರಾಗಿದ್ದ ರವಿ ವರ್ಮನ್ ಅವರು ಸರಿದಂತೆ ಅತ್ಯುತ್ತಮ ತಾಂತ್ರಿಕ ವರ್ಗವನ್ನು ಹೊಂದಿದೆ ಉಗ್ರಂ ಟೀಮ್. ಈ ಚಿತ್ರದಲ್ಲಿ ತುಂಗಾ ರವಿ, ಪ್ರದೀಪ್ , ಶರತ್, ಎಂ. ಸಿ. ಆನಂದ್ , ಮಂಜುನಾಥ್ ಖಳನಟ ರಾಗಿದ್ದಾರೆ . ರವಿ ಬಸರೂರ್ ಅವರು ಚಿತ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೊಂದು ಆಕ್ಷನ್, ಡ್ರಾಮ ಮತ್ತು ಪ್ರೀತಿಯ ಅಂಶಗಳನ್ನು ಹೊಂದಿರುವ ಚಿತ್ರವಾಗಿದೆ.

webdunia
PR
ಕೆಜಿಎಫ್ ಮತ್ತು ಗುಲ್ಬರ್ಗ ಸಿನಿಮಾದ ಚಿತ್ರೀಕರಣದ ಸ್ಥಳಗಳು. ಕನ್ನಡದ ಮುದ್ದಾದ ನಟಿ ಹರಿಪ್ರಿಯ ಈ ಚಿತ್ರದಲ್ಲಿ ನಿತ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಈಕೆ ಕಳೆದ ಕೆಲವು ತಿಂಗಳಿಂದ ಆಸ್ಟ್ರೇಲಿಯಾದಲ್ಲಿ ಇದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿ ಉಗ್ರಂ ಮೂಲಕ ಕೆಲಸ ಮಾಡಲು ಆರಂಭಿಸಿದ್ದಾರೆ. ತಾನು ಕರ್ನಾಟಕ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತಿವೆ .. ಎನ್ನುವುದನ್ನು ಮೀಡಿಯಾದವರ ಮುಂದೆ ಹೇಳಿದರು ಹರಿಪ್ರಿಯ.

ಈ ಚಿತ್ರದ ಟೈಟಲ್ ನ್ನು ಶ್ರೀ ಲಕ್ಷ್ಮಿ ನರಸಿಂಹ ಸ್ತೋತ್ರದಿಂದ ಆಯ್ಕೆ ಮಾಡಿದ್ದು ಎಂದು ಶ್ರೀ ಮುರಳಿ ಈ ಸಮಯದಲ್ಲಿ ತಿಳಿಸಿದರು. ಈ ಚಿತ್ರದಲ್ಲಿ ತಿಲಕ್ ಸಹ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಅವರಿಗೆ ಪಾತ್ರವು ತುಂಬಾ ತೃಪ್ತಿ ನೀಡಿದೆಯಂತೆ. ತಾನು ನಟಿಸಿರುವ 16 ಸಿನಿಮಾಗಳಲ್ಲಿ ಈ ಚಿತ್ರದ ಪಾತ್ರ ಹೆಚ್ಚು ಖುಷಿ ನೀದಿಎ ಎನ್ನುವುದು ತಿಲಕ್ ಮನದ ಮಾತು. ತೂಗುದೀಪ ಶ್ರೀನಿವಾಸ್ ಬ್ಯಾನರ್ ಈ ಚಿತ್ರದ ಹಂಚಿಕೆದಾರರಾಗಿದ್ದಾರೆ. ಇದು ಜನವರಿ ಅಂತಿಮವಾರದಲ್ಲಿ ಇಡಿ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದೆ.

Share this Story:

Follow Webdunia kannada