Webdunia - Bharat's app for daily news and videos

Install App

ಕನ್ನಡ ಚಿತ್ರರಂಗದ ಭಾಷಾ ಪ್ರೇಮ ಬರೀ ಬೂಟಾಟಿಕೆ?

Webdunia
PR
ಮಾತು ಮಾತಿಗೆ ಕನ್ನಡ, ಕನ್ನಡ ಅನ್ನೋ ಅಣಿಮುತ್ತುಗಳನ್ನು ಉಚಿತವಾಗಿ ಉದುರಿಸುವ ಕನ್ನಡ ಚಿತ್ರರಂಗದ ದಿಗ್ಗಜರ ಬಂಡವಾಳ ಒಂದೊಂದಾಗಿಯೇ ಬಯಲಾಗುತ್ತಿದೆ. ಅವರು ಕನ್ನಡ, ಕನ್ನಡ ಅಂತ ಬೊಬ್ಬಿರಿಯುತ್ತಿರುವುದು ಹಣಕ್ಕಾಗಿಯೇ ಹೊರತು, ಇನ್ನೇನಕ್ಕೂ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ಬಾರಿ ಹಾಗೆ ರುಜುವಾತು ಮಾಡಲು ಹೊರಟಿರುವುದು ಬೇರೆ ಯಾರೂ ಅಲ್ಲ, ಸ್ವತಃ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) -- ತನ್ನ ಚುನಾವಣೆ, ಅಧ್ಯಕ್ಷರ ಆಯ್ಕೆ, ಅವರ ನಡವಳಿಕೆ, ಕನ್ನಡ ವಿರೋಧಿ ನೀತಿ ಸೇರಿದಂತೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಸಂಸ್ಥೆ. ಅದು ತನ್ನ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಕೈಲಾಗದವರ ಮೇಲೆ ಮಾತ್ರ. ಈಗ ಅದಕ್ಕೆ ಸ್ಪಷ್ಟ ನಿದರ್ಶನಗಳು ಸಿಗುತ್ತಿವೆ. ಈ ಬಾರಿ ದೀಪಾವಳಿಗೆ ಸಾಲು ಸಾಲು ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ, ಕೆಎಫ್‌ಸಿಸಿ ಮತ್ತು ಅದರ ಸದಸ್ಯರು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯಲು ಸಿದ್ಧರಾಗಿದ್ದಾರೆ.

ಕೆಎಫ್‌ಸಿಸಿ ನಿಯಮಾವಳಿಗಳ ಪ್ರಕಾರ, ಕನ್ನಡ ಹೊರತುಪಡಿಸಿದ ಯಾವುದೇ ಭಾಷೆಯ ಚಿತ್ರ ಕರ್ನಾಟಕದಲ್ಲಿ 25ಕ್ಕಿಂತ ಹೆಚ್ಚು ಫ್ರಿಂಟ್‌ಗಳನ್ನು ಪ್ರದರ್ಶಿಸಬಾರದು. ಅಲ್ಲದೆ, ಪರಭಾಷಾ ಚಿತ್ರ ತನಗೆ ಸಂಬಂಧಪಟ್ಟ ರಾಜ್ಯದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು.

ಆದರೆ ಈ ನಿಯಮವನ್ನು ಮಂಡಳಿ ಗಾಳಿಗೆ ತೂರುವುದೇ ಹೆಚ್ಚು. ಪರಭಾಷಾ ಚಿತ್ರಗಳ ನಿರ್ಮಾಪಕರನ್ನು, ವಿತರಕರನ್ನು ನಿಯಂತ್ರಿಸುವ ಗೋಜಿಗೆ ಹೋಗುವುದೇ ಇಲ್ಲ. ಈ ಬಾರಿಯೂ ಅದೇ ನಡೆದಿದೆ. ಅದರ ಹಿಂದಿರುವ ವ್ಯಕ್ತಿಗಳು ಮತ್ತು ಕಾರಣವಂತೂ ರೇಜಿಗೆ ಹುಟ್ಟಿಸುವಂತಿದೆ.

ಈ ದೀಪಾವಳಿಗೆ ಬಹುನಿರೀಕ್ಷೆಯ ವಿಜಯ್ ನಾಯಕನಾಗಿರುವ 'ವೇಲಾಯುಧಂ' ಮತ್ತು ಸೂರ್ಯ ನಾಯಕತ್ವದ 'ಏಳಾಂ ಅರಿವು' (ಸೆವೆಂತ್ ಸೆನ್ಸ್) ಎಂಬ ಎರಡು ತಮಿಳು ಹಾಗೂ ಶಾರೂಖ್ ಖಾನ್‌ರ 'ರಾ. ವನ್' ಬಿಡುಗಡೆಯಾಗುತ್ತಿವೆ. ಈ ಮೂರು ಚಿತ್ರಗಳು ಕರ್ನಾಟಕದ 200ಕ್ಕೂ ಹೆಚ್ಚು ಪರದೆಗಳನ್ನು ಆಕ್ರಮಿಸಿಕೊಳ್ಳಲಿವೆ. ಪರಿಣಾಮ, ಹಿಟ್ ಹಾದಿಯಲ್ಲಿರುವ ಪರಮಾತ್ಮ, ಸಾರಥಿ, ಕಳ್ಳ ಮಳ್ಳ ಸುಳ್ಳಗಳಂತಹ ಕನ್ನಡ ಚಿತ್ರಗಳು ಮೂಲೆಗುಂಪಾಗಲಿವೆ.

ಹೀಗೆ ಕನ್ನಡದ ನೆಲದಲ್ಲಿ ಕನ್ನಡ ಚಿತ್ರಗಳು ಮೂಲೆಗುಂಪಾಗಲು ಕಾರಣ ಯಾರು ಗೊತ್ತೇ? ಸ್ವತಃ ಕನ್ನಡಿಗರು. ಮೊದಲನೆಯದಾಗಿ ಕರ್ನಾಟಕ ಚಲನಚಿತ್ರ ಮಂಡಳಿ ಮಗುಮ್ಮಾಗಿ ಕುಳಿತಿರುವುದು. ಎರಡನೆಯದಾಗಿ ನಿರ್ಮಾಪಕ ಕೆ. ಮಂಜು.

ಹೌದು, ಸದಾ ಕನ್ನಡಕ್ಕಾಗಿ ಕೈ ಎತ್ತುವ ನಿರ್ಮಾಪಕ ಮಂಜು ತಮಿಳು ಚಿತ್ರವೊಂದರ ವಿತರಕ. ವಿಜಯ್ ನಾಯಕರಾಗಿರುವ 'ವೇಲಾಯುಧಂ' ವಿತರಣೆಯ ಕರ್ನಾಟಕದ ಹಕ್ಕುಗಳನ್ನು ಹತ್ತಾರು ಕೋಟಿ ರೂಪಾಯಿಗಳಿಗೆ ಪಡೆದುಕೊಂಡು, ಭಾರೀ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕೆಎಫ್‌ಸಿಸಿ ನಿಯಮಾವಳಿಗಳು ಸದ್ಯಕ್ಕೆ ಅವರಿಗೆ ಅನ್ವಯವಾಗುತ್ತಿಲ್ಲ.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂತ ಹೇಳುವುದು ಇದಕ್ಕೆ ತಾನೇ? ಇಂತಹಾ ಪ್ರಸಂಗ ಇದೇ ಮೊದಲೇನಲ್ಲ. ಈ ಹಿಂದೆ ರಜನಿಕಾಂತ್ ನಾಯಕರಾಗಿದ್ದ ಚಿತ್ರಗಳು ಬಿಡುಗಡೆಯಾದಾಗಲೂ, ಕನ್ನಡದ ನಿರ್ಮಾಪಕರು ವಿತರಣೆಯ ಹಕ್ಕುಗಳನ್ನು ಪಡೆದು ಬೇಕಾಬಿಟ್ಟಿ ರಿಲೀಸ್ ಮಾಡಿ ಕನ್ನಡಕ್ಕೆ ದ್ರೋಹ ಬಗೆದಿದ್ದರು. ಸ್ವತಃ ಕೆಎಫ್‌ಸಿಸಿಯೇ ಸುಮ್ಮನಿರುವಾಗ ಬೇರೆ ಇನ್ಯಾರಾದರೂ ಏನು ಮಾಡಲು ಸಾಧ್ಯ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments