ಇದು ಕನ್ನಡದ ಕಥೆಯಾಯ್ತು. ತಮಿಳಿನಲ್ಲಿ ಐಂದ್ರಿತಾ ಅದೃಷ್ಟ ಯಾಕೆ ಕೈ ಕೊಡ್ತು? ಇದಕ್ಕೆ ಉತ್ತರ ಅಪಘಾತ. ಕನ್ನಡಿಗ ವಿನಯ್ ರೈ ನಾಯಕನಾಗಬೇಕಿದ್ದ ಚಿತ್ರವೀಗ ಮುಂದಕ್ಕೆ ಹೋಗಿದೆ. ಕಾರಣ, ನಾಯಕನಿಗೆ ಅಪಘಾತವಾಗಿದೆ. ಹಾಗಾಗಿ ಚಿತ್ರದ ಆರಂಭವೇನಿದ್ದರೂ ಮೇ ತಿಂಗಳಲ್ಲಿ. ಅಷ್ಟರಲ್ಲಿ ಪ್ರೊಜೆಕ್ಟ್ ಏನು ಬೇಕಾದರೂ ಆಗಬಹುದು!
ಅಂದ ಹಾಗೆ, ಈ ಚಿತ್ರದ ನಿರ್ದೇಶಕ ಛಾಯಾಗ್ರಾಹಕ ರಮೇಶ್. ಇದೇ ಮೊದಲ ಬಾರಿ ಅವರು ನಿರ್ದೇಶಕರಾಗುತ್ತಿದ್ದಾರೆ.
ಇನ್ನೊಂದು ವಿಷಯ ಗೊತ್ತಿರಲಿ. ಐಂದ್ರಿತಾ ಹೀಗೆ ತಮಿಳಿನಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಕುಲ್ ನಾಯಕನಾಗಿರುವ ಚಿತ್ರಕ್ಕೂ ಐಂಡಿ ಆಯ್ಕೆಯಾಗಿದ್ದರು. ಇನ್ನೇನು ಶೂಟಿಂಗ್ ಶುರು ಎನ್ನುವಷ್ಟರಲ್ಲಿ ಇಡೀ ಪ್ರೊಜೆಕ್ಟ್ ನಿಂತು ಹೋಗಿತ್ತು.
ಆದರೆ ಈ ಬಾರಿ ಹಾಗಾಗೋದಿಲ್ಲ ಅನ್ನೋದು ಐಂದ್ರಿತಾ ಭರವಸೆ. ವಿನಯ್ ಕಾಲು ಮುರಿದಿರುವುದು ಹೌದು. ಅದರಿಂದಲೇ ಶೂಟಿಂಗ್ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ಶೂಟಿಂಗ್ ಇಲ್ಲ ಅಂತಾರವರು.