Select Your Language

Notifications

webdunia
webdunia
webdunia
webdunia

ಏರಿಕಾ ಫರ್ನಾಂಡೀಸ್ ಕಳಕಳಿ ಯಾವ ಕಾರಣಕ್ಕೆ ಗೊತ್ತೇ?

ಏರಿಕಾ ಫರ್ನಾಂಡೀಸ್ ಕಳಕಳಿ ಯಾವ ಕಾರಣಕ್ಕೆ ಗೊತ್ತೇ?
, ಶುಕ್ರವಾರ, 7 ಫೆಬ್ರವರಿ 2014 (09:56 IST)
PR
ಸ್ಯಾಂಡಲ್ ವುಡ್ ನಲ್ಲಿ ನಿನ್ನಿಂದಲೇ ಚಿತ್ರದ ಮುಖಾಂತರ ಎಂಟ್ರಿ ಆದ ಚೆಲುವೆ ಏರಿಕಾ ಫರ್ನಾಂಡೀಸ್. ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಈ ಚೆಲುವೆ ಈಗ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಕೆ ನಿನ್ನಿಂದಲೇ ಸ್ಕೈ ಡ್ರೈವ್ ದೃಶ್ಯದಲ್ಲಿ ಭಾಗವಹಿಸಿದ್ದಳು. ಇದೆಲ್ಲ ಹಳೆಯ ಕಥೆ.

ಆದರೆ ಬೆಂಗಳೂರಿನಲ್ಲಿ ನಡೆದ ಸ್ಕೈ ಡ್ರೈವಿಂಗ್ ಸಂದರ್ಭದಲ್ಲಿ ಸಾವಿಗೆ ಈಡಾದ ವಿ. ರಮ್ಯ ಪ್ರಕರಣದ ಬಳಿಕ ಏರಿಕಾ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾಳೆ. ಆಕೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ದೃಶ್ಯಗಳಲ್ಲಿ ಭಾಗವಹಿಸುವುದಿಲ್ಲವಂತೆ . ಅಷ್ಟೇ ಅಲ್ಲದೆ ಈರೀತಿಯ ಸಾಹಸಗಳನ್ನು ಮಾಡ ಬಯಸುವ ಸಾಹಸಿಗಳಿಗೆ ಸೂಕ್ತ ರಕ್ಷಣೆ ಅಗತ್ಯ ಎನ್ನುವ ಮಾತು ಆಡಿದ್ದಾರೆ, ಇತ್ತೀಚೆಗೆ ಆಕಾಶದಲ್ಲಿ ಹಾರಾಡುತ್ತಾ ಒದ್ದಾಡುವ ಸಾಹಸಿ ರಮ್ಯ ಅನ್ನುವ ದುರ್ದೈವಿ ಆಕಾಶದಲ್ಲಿ ಪ್ಯಾರಾಚುಟ್ ನ್ನು ಬಿಚ್ಚಲಾಗದೆ ಸಾವಿರ ಅಡಿಗಳ ಮೇಲಿಂದ ಬಿದ್ದು ಮರನಿಸಿದ್ದರು.

Share this Story:

Follow Webdunia kannada