Webdunia - Bharat's app for daily news and videos

Install App

ಎಲ್ಲಾ ಕೆಲಸ ಪೂರ್ತಿ ಮಾಡಿಕೊಡ್ತೀನಿ ನಾನು ಎಂದ ರಮ್ಯಾ

Webdunia
ಸೋಮವಾರ, 25 ನವೆಂಬರ್ 2013 (12:13 IST)
PR
PR
ರಮ್ಯಾ ಕನ್ನಡ ಚಿತ್ರರಂಗಕ್ಕೆ ತುಂಬಾ ಬೇಕಾದ ನಟಿ. ಸದಾ ಸುದ್ದಿಯಲ್ಲಿರುವ ಈ ಗ್ಲಾಮಿ ಹುಡುಗಿ ಒಂದಲ್ಲ ಒಂದು ಗಲಾಟೆ ಮಾಡುತ್ತಾ ಜನರಿಗೆ ಹೆಚ್ಚು ಗೊತ್ತಾಗಿದ್ದಾರೆ. ಆಕೆ ವಿಷಯದಲ್ಲಿ ಹೇಳ ಬೇಕಾದ ಸಂಗತಿ ಅಂದರೆ ಇಷ್ಟು ದಿನಗಳು ನಟಿಯಾಗಿದ್ದ ಈ ಚೆಲುವೆ ಈಗ ರಾಜಕೀಯ ಕ್ಷೇತ್ರದಲ್ಲೂ ತನ್ನ ಪ್ರಭಾವ ತೋರಿದ್ದಾರೆ.

ಎಂಪಿಯಾಗಿ ತನ್ನ ಹುದ್ದೆಯನ್ನು ಅತ್ಯಂತ ಗೌರವದಿಂದ ಕಾಪಾಡಿಕೊಳ್ಳುತ್ತಿರುವ ರಮ್ಯ ಹೆಚ್ಚು ಗಲಾಟೆ ಮಾಡಿದ್ದು ನೀರ್ ದೋಸೆ ವಿಷಯಕ್ಕೆ ಸಂಬಂಧಿಸಿದಂತೆ ಈ ನಟಿ ತನ್ನ ರಾಜಕೀಯ ಬದುಕು ಮತ್ತು ವೃತ್ತಿ ಬದುಕಿನಲ್ಲಿ ಹೆಚ್ಚು ಕಾಲ ಉಳಿಯಲು ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಎಂಪಿಯಾಗಲು ಸ್ಪರ್ಧೆ ನಡಿಸಿದ್ದ ಸಮಯದಲ್ಲಿ ಆಕೆ ತನ್ನ ತಂದೆಯಯನ್ನು ಕಳೆದುಕೊಂಡರು.ಆ ದುಃಖದ ಸಮಯದಲ್ಲೂ ರಮ್ಯ ಧೃತಿಗೆಡದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದರು.

ಈಗ ಅನೇಕ ದಿನಗಳಿಂದ ಬಾಕಿ ಉಳಿದಿದ್ದ ಆರ್ಯನ್ ಚಿತ್ರದ ದೃಶ್ಯಗಳ ಶೂಟಿಂಗ್ ನಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದರು.ಆಕೆ ತಾನು ಒಪ್ಪಿಕೊಂಡಿರುವ ದಿಲ್
ಕಾ ರಾಜ ಮತ್ತು ನೀರ್ ದೋಸೆ ಚಿತ್ರಗಳನ್ನು ಪೂರ್ತಿ ಮಾಡುವುದಾಗಿ ಸಹ ಹೇಳಿದ್ದಾರೆ. ಈ ಮಾತು ಮೊದಲೇ ಹೇಳಿದ್ದಿದ್ದಿದ್ದರೆ ಇಷ್ಟೆಲ್ಲಾ ರಾದ್ದಾಂತಗಳು ಆಗ್ತಾನೆ ಇರಲಿಲ್ಲ..ಇದು ಇಂಡಸ್ಟ್ರಿಯ ಹೊಸ ವೇದಾಂತ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments