Select Your Language

Notifications

webdunia
webdunia
webdunia
webdunia

ಎಲ್ಲಾ ಕೆಲಸ ಪೂರ್ತಿ ಮಾಡಿಕೊಡ್ತೀನಿ ನಾನು ಎಂದ ರಮ್ಯಾ

ಎಲ್ಲಾ ಕೆಲಸ ಪೂರ್ತಿ ಮಾಡಿಕೊಡ್ತೀನಿ ನಾನು ಎಂದ ರಮ್ಯಾ
ಬೆಂಗಳೂರು , ಸೋಮವಾರ, 25 ನವೆಂಬರ್ 2013 (12:13 IST)
PR
PR
ರಮ್ಯಾ ಕನ್ನಡ ಚಿತ್ರರಂಗಕ್ಕೆ ತುಂಬಾ ಬೇಕಾದ ನಟಿ. ಸದಾ ಸುದ್ದಿಯಲ್ಲಿರುವ ಈ ಗ್ಲಾಮಿ ಹುಡುಗಿ ಒಂದಲ್ಲ ಒಂದು ಗಲಾಟೆ ಮಾಡುತ್ತಾ ಜನರಿಗೆ ಹೆಚ್ಚು ಗೊತ್ತಾಗಿದ್ದಾರೆ. ಆಕೆ ವಿಷಯದಲ್ಲಿ ಹೇಳ ಬೇಕಾದ ಸಂಗತಿ ಅಂದರೆ ಇಷ್ಟು ದಿನಗಳು ನಟಿಯಾಗಿದ್ದ ಈ ಚೆಲುವೆ ಈಗ ರಾಜಕೀಯ ಕ್ಷೇತ್ರದಲ್ಲೂ ತನ್ನ ಪ್ರಭಾವ ತೋರಿದ್ದಾರೆ.

ಎಂಪಿಯಾಗಿ ತನ್ನ ಹುದ್ದೆಯನ್ನು ಅತ್ಯಂತ ಗೌರವದಿಂದ ಕಾಪಾಡಿಕೊಳ್ಳುತ್ತಿರುವ ರಮ್ಯ ಹೆಚ್ಚು ಗಲಾಟೆ ಮಾಡಿದ್ದು ನೀರ್ ದೋಸೆ ವಿಷಯಕ್ಕೆ ಸಂಬಂಧಿಸಿದಂತೆ ಈ ನಟಿ ತನ್ನ ರಾಜಕೀಯ ಬದುಕು ಮತ್ತು ವೃತ್ತಿ ಬದುಕಿನಲ್ಲಿ ಹೆಚ್ಚು ಕಾಲ ಉಳಿಯಲು ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಎಂಪಿಯಾಗಲು ಸ್ಪರ್ಧೆ ನಡಿಸಿದ್ದ ಸಮಯದಲ್ಲಿ ಆಕೆ ತನ್ನ ತಂದೆಯಯನ್ನು ಕಳೆದುಕೊಂಡರು.ಆ ದುಃಖದ ಸಮಯದಲ್ಲೂ ರಮ್ಯ ಧೃತಿಗೆಡದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದರು.

ಈಗ ಅನೇಕ ದಿನಗಳಿಂದ ಬಾಕಿ ಉಳಿದಿದ್ದ ಆರ್ಯನ್ ಚಿತ್ರದ ದೃಶ್ಯಗಳ ಶೂಟಿಂಗ್ ನಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದರು.ಆಕೆ ತಾನು ಒಪ್ಪಿಕೊಂಡಿರುವ ದಿಲ್
ಕಾ ರಾಜ ಮತ್ತು ನೀರ್ ದೋಸೆ ಚಿತ್ರಗಳನ್ನು ಪೂರ್ತಿ ಮಾಡುವುದಾಗಿ ಸಹ ಹೇಳಿದ್ದಾರೆ. ಈ ಮಾತು ಮೊದಲೇ ಹೇಳಿದ್ದಿದ್ದಿದ್ದರೆ ಇಷ್ಟೆಲ್ಲಾ ರಾದ್ದಾಂತಗಳು ಆಗ್ತಾನೆ ಇರಲಿಲ್ಲ..ಇದು ಇಂಡಸ್ಟ್ರಿಯ ಹೊಸ ವೇದಾಂತ!

Share this Story:

Follow Webdunia kannada