Webdunia - Bharat's app for daily news and videos

Install App

'ಉಲ್ಲಾಸ-ಉತ್ಸಾಹದಿಂದ' ಕೊಲ್ಕತ್ತಾಕ್ಕೆ ಗಣೇಶ್

Webdunia
ನಟ ಗಣೇಶ್ ಕೋಲ್ಕತ್ತಾಕ್ಕೆ ತೆರಳಿದ್ದಾರೆ. ಉಲ್ಲಾಸ ಉತ್ಸಾಹದ ಚಿತ್ರೀಕರಣಕ್ಕಾಗಿ ಅವರು ಹೋಗುತ್ತಿದ್ದಾರೆ. ತುಂಬಾ ಇಷ್ಪಪಟ್ಟು ತೆಲುಗಿನ ಚಿತ್ರವನ್ನು ರೀಮೇಕ್ ಮಾಡುತ್ತಿದ್ದೇವೆ. ಮೂಲ ಚಿತ್ರದ ನಿರ್ದೇಶಕ ಕರುಣಾಕರ್ ಅವರೊಂದಿಗೆ ಮಾತನಾಡಿ ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದೀರಾ ಎಂದು ಅಭಿನಂದನೆ ತಿಳಿಸಿದೆ ಎಂದರು ಗಣೇಶ್.

ತೆಲುಗಿನಲ್ಲಿ ಆ ಚಿತ್ರ ನೋಡಿದ ಗಣೇಶ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರಂತೆ. ಆ ಚಿತ್ರವನ್ನು ಇಲ್ಲಿನ ನೇಟಿವೀಟಿಗೆ ತಕ್ಕಂತೆ ಬದಲಾಯಿಸಿದ್ದು, 2009ರ ಮೆಗಾಹಿಟ್ ಸಿನಿಮಾವಾಗಲಿದೆ ಎಂಬ ವಿಶ್ವಾಸವನ್ನು ಗಣೇಶ್ ವ್ಯಕ್ತಪಡಿಸುತ್ತಾರೆ.

ಚಿತ್ರದಲ್ಲಿ ಗಣೇಶ್ ತುಂಟಾಟ ಆಡುವ ಹುಡುಗ. ಅಪ್ಪ ರಂಗಾಯಣ ರಘು - ಗ್ಯಾರೇಜ್ ಮಾಲೀಕ. ಹಲವು ದುಬಾರಿ ಬೆಲೆಯ ಕಾರುಗಳು ದುರಸ್ತಿಗೆ ಬರುವ ಸ್ಥಳವದು. ಹೀಗೆ ಐವತ್ತು ಲಕ್ಷ ಬೆಲೆ ಬಾಳುವ ಕಾರೊಂದು ದುರಸ್ತಿಗೆ ಬರುತ್ತದೆ. ಅಪ್ಪ ಇಲ್ಲದ ಸಮಯವನ್ನು ಹೊಂಚು ಹಾಕುತ್ತಿದ್ದ ಗಣೇಶ್ ತನ್ನ ಸ್ನೇಹಿತರೊಂದಿಗೆ ಸುತ್ತಾಡುವುದಕ್ಕೆ ಹೊರಡುತ್ತಾನೆ. ಆಕಸ್ಮಿಕವಾಗಿ ಕಾರು ಮಾಲೀಕನ ಎದುರೇ ಅಪಘಾತಕ್ಕೀಡಾಗುತ್ತದೆ. ಈ ದೃಶ್ಯ ಕಂಡು ಸಿಟ್ಟಾದ ಮಾಲೀಕ ರಂಗಾಯಣ ರಘು ಮೇಲೆ ಕೆಂಡಕಾರುತ್ತಾನೆ.

ಕೋಪದಿಂದ ಮನೆಗೆ ಬರುವ ಅಪ್ಪ, ಮಗನ ಮೇಲೆ ಉಗ್ರನಾಗುತ್ತಾನೆ. ಆ ಸಮಯಕ್ಕೆ ಅಮ್ಮ ಬಂದು ಮಗನನ್ನು ಕಾಪಾಡುತ್ತಾಳೆ. ಈ ಹಾಸ್ಯ ದೃಶ್ಯವನ್ನು ನಿರ್ದೇಶಕ ದೇವರಾಜ್ ಪಾಲನ್ ಚಿತ್ರಿಸಿಕೊಂಡರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments