Select Your Language

Notifications

webdunia
webdunia
webdunia
webdunia

'ಉಲ್ಲಾಸ-ಉತ್ಸಾಹದಿಂದ' ಕೊಲ್ಕತ್ತಾಕ್ಕೆ ಗಣೇಶ್

'ಉಲ್ಲಾಸ-ಉತ್ಸಾಹದಿಂದ' ಕೊಲ್ಕತ್ತಾಕ್ಕೆ ಗಣೇಶ್
ನಟ ಗಣೇಶ್ ಕೋಲ್ಕತ್ತಾಕ್ಕೆ ತೆರಳಿದ್ದಾರೆ. ಉಲ್ಲಾಸ ಉತ್ಸಾಹದ ಚಿತ್ರೀಕರಣಕ್ಕಾಗಿ ಅವರು ಹೋಗುತ್ತಿದ್ದಾರೆ. ತುಂಬಾ ಇಷ್ಪಪಟ್ಟು ತೆಲುಗಿನ ಚಿತ್ರವನ್ನು ರೀಮೇಕ್ ಮಾಡುತ್ತಿದ್ದೇವೆ. ಮೂಲ ಚಿತ್ರದ ನಿರ್ದೇಶಕ ಕರುಣಾಕರ್ ಅವರೊಂದಿಗೆ ಮಾತನಾಡಿ ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದೀರಾ ಎಂದು ಅಭಿನಂದನೆ ತಿಳಿಸಿದೆ ಎಂದರು ಗಣೇಶ್.

ತೆಲುಗಿನಲ್ಲಿ ಆ ಚಿತ್ರ ನೋಡಿದ ಗಣೇಶ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರಂತೆ. ಆ ಚಿತ್ರವನ್ನು ಇಲ್ಲಿನ ನೇಟಿವೀಟಿಗೆ ತಕ್ಕಂತೆ ಬದಲಾಯಿಸಿದ್ದು, 2009ರ ಮೆಗಾಹಿಟ್ ಸಿನಿಮಾವಾಗಲಿದೆ ಎಂಬ ವಿಶ್ವಾಸವನ್ನು ಗಣೇಶ್ ವ್ಯಕ್ತಪಡಿಸುತ್ತಾರೆ.

ಚಿತ್ರದಲ್ಲಿ ಗಣೇಶ್ ತುಂಟಾಟ ಆಡುವ ಹುಡುಗ. ಅಪ್ಪ ರಂಗಾಯಣ ರಘು - ಗ್ಯಾರೇಜ್ ಮಾಲೀಕ. ಹಲವು ದುಬಾರಿ ಬೆಲೆಯ ಕಾರುಗಳು ದುರಸ್ತಿಗೆ ಬರುವ ಸ್ಥಳವದು. ಹೀಗೆ ಐವತ್ತು ಲಕ್ಷ ಬೆಲೆ ಬಾಳುವ ಕಾರೊಂದು ದುರಸ್ತಿಗೆ ಬರುತ್ತದೆ. ಅಪ್ಪ ಇಲ್ಲದ ಸಮಯವನ್ನು ಹೊಂಚು ಹಾಕುತ್ತಿದ್ದ ಗಣೇಶ್ ತನ್ನ ಸ್ನೇಹಿತರೊಂದಿಗೆ ಸುತ್ತಾಡುವುದಕ್ಕೆ ಹೊರಡುತ್ತಾನೆ. ಆಕಸ್ಮಿಕವಾಗಿ ಕಾರು ಮಾಲೀಕನ ಎದುರೇ ಅಪಘಾತಕ್ಕೀಡಾಗುತ್ತದೆ. ಈ ದೃಶ್ಯ ಕಂಡು ಸಿಟ್ಟಾದ ಮಾಲೀಕ ರಂಗಾಯಣ ರಘು ಮೇಲೆ ಕೆಂಡಕಾರುತ್ತಾನೆ.

ಕೋಪದಿಂದ ಮನೆಗೆ ಬರುವ ಅಪ್ಪ, ಮಗನ ಮೇಲೆ ಉಗ್ರನಾಗುತ್ತಾನೆ. ಆ ಸಮಯಕ್ಕೆ ಅಮ್ಮ ಬಂದು ಮಗನನ್ನು ಕಾಪಾಡುತ್ತಾಳೆ. ಈ ಹಾಸ್ಯ ದೃಶ್ಯವನ್ನು ನಿರ್ದೇಶಕ ದೇವರಾಜ್ ಪಾಲನ್ ಚಿತ್ರಿಸಿಕೊಂಡರು.

Share this Story:

Follow Webdunia kannada