Webdunia - Bharat's app for daily news and videos

Install App

ಉಪ್ಪಿ ನಿರ್ದೇಶನದಲ್ಲಿ ಪುನೀತ್; ಪಾರ್ವತಮ್ಮ ಏನಂತಾರೆ?

Webdunia
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಳಿರುವ ಮಾತಿದು. ತನ್ನ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರನ್ನು ವಿಭಿನ್ನ ಚಿತ್ರಗಳಲ್ಲಿ ನಿರ್ದೇಶಿಸಿರುವ ರಿಯಲ್ ಸ್ಟಾರ್ ಉಪೇಂದ್ರ, ನನ್ನನ್ನು ಹಾಕಿಕೊಂಡು ನಿರ್ದೇಶಿಸುವುದಾದರೆ, ನಟಿಸಲು ತಾನು ತುದಿಗಾಲಲ್ಲಿ ನಿಂತಿರುತ್ತೇನೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉಪೇಂದ್ರ ನಿರ್ದೇಶನದ ಮೂರನೇ ಚಿತ್ರ 'ಓಂ'. ಇದರ ಮೂಲಕ ಶಿವಣ್ಣ ಮರು ಜೀವ ಪಡೆದುಕೊಂಡಿದ್ದರು. ಬಳಿಕ 'ಸ್ವಸ್ತಿಕ್' ಚಿತ್ರ ಮಾಡಿದ್ದರು. ರಾಘಣ್ಣನಿಗೆ ವಿಭಿನ್ನ ಗೆಟಪ್ ಚಿತ್ರದಲ್ಲಿದ್ದ ಹೊರತಾಗಿಯೂ ಸಿನಿಮಾ ಫ್ಲಾಪ್ ಆಗಿತ್ತು.
MOKSHA

ಈಗ ತನಗೂ ಉಪ್ಪಿ ಚಿತ್ರದಲ್ಲಿ ನಟಿಸಬೇಕು ಎಂದು ಪುನೀತ್ ಹೇಳಿಕೊಂಡಿದ್ದಾರೆ. 'ಸೂಪರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತನ್ನ ಆಸೆಯನ್ನು ಅವರು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ.

ನನ್ನ ಹಿರಿಯ ಸಹೋದರರನ್ನು ಉಪೇಂದ್ರ ಈಗಾಗಲೇ ನಿರ್ದೇಶಿಸಿದ್ದು, ಅವರ ಚಿತ್ರದಲ್ಲಿ ನಟಿಸಲು ಕಾತರದಿಂದಿದ್ದೇನೆ ಎಂದು ಪುನೀತ್ ಹೇಳಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು.

' ತರ್ಲೆ ನನ್ಮಗ'ದಲ್ಲಿ ಜಗ್ಗೇಶ್, 'ಶ್'ನಲ್ಲಿ ಕುಮಾರ್ ಗೋವಿಂದ್, 'ಓಂ'ನಲ್ಲಿ ಶಿವರಾಜ್ ಕುಮಾರ್, 'ಆಪರೇಷನ್ ಅಂತ'ದಲ್ಲಿ ಅಂಬರೀಷ್ ಹಾಗೂ 'ಸ್ವಸ್ತಿಕ್' ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಉಪೇಂದ್ರ ಇದುವರೆಗೆ ನಿರ್ದೇಶಿಸಿದ್ದಾರೆ.

ಪಾರ್ವತಮ್ಮ ಏನಂತಾರೆ?
ನನ್ನ ಮಗನನ್ನು (ರಾಘವೇಂದ್ರ ರಾಜ್‌ಕುಮಾರ್) ಉಗ್ರಗಾಮಿಯನ್ನಾಗಿ ತೋರಿಸಿ, ನಮ್ಮ ಕುಟುಂಬದ ಘನತೆಯನ್ನು ಮಣ್ಣುಪಾಲು ಮಾಡಲು ಉಪೇಂದ್ರ ಯತ್ನಿಸಿದ್ದ. ಅಷ್ಟೇ ಅಲ್ಲದೆ, ಪುನೀತ್‌ನನ್ನು ಕೂಡ ಹಾಕಿಕೊಂಡು ನಿರ್ದೇಶಿಸುತ್ತೇನೆ ಎಂದು ಮನೆಗೆ ಚಿತ್ರಕಥೆ ಹಿಡಿದುಕೊಂಡು ಬಂದಿದ್ದ. ಅಂದು ಆತನನ್ನು ಗದರಿಸಿದ್ದೆ ಎಂದು ಪಾರ್ವತಮ್ಮ ರಾಜ್‌ಕುಮಾರ್ 'ಕನ್ನಡ ಪ್ರಭ' ಪತ್ರಿಕೆಯ ಅಂಕಣದಲ್ಲಿ ಬರೆದಿದ್ದರು.

' ಅಭಿ ಚಿತ್ರದ ನಂತರ ನಾನು ಪುನೀತ್‌ಗಾಗಿ ಮತ್ತೊಂದು ಚಿತ್ರ ಮಾಡಬೇಕೆಂದಿದ್ದೆ. ಈ ಹೊತ್ತಿನಲ್ಲಿ ಪುನೀತ್‌ಗಾಗಿ ಕಥೆಯೊಂದನ್ನು ಹಿಡಿದುಕೊಂಡು ಉಪೇಂದ್ರ ಮನೆಗೆ ಬಂದಿದ್ದ. ನೀನೀಗ ಸ್ವಸ್ತಿಕ್‌ನಂತಹ ಮತ್ತೊಂದು ಚಿತ್ರವನ್ನು ಮಾಡಲು ಬಂದಿದ್ದೀಯಾ ಎಂದು ನಾನು ನೇರವಾಗಿ ಪ್ರಶ್ನಿಸಿದೆ. ಒಬ್ಬ ನಾಯಕನಾದ ನಿರ್ದೇಶಕ ಮತ್ತೊಬ್ಬ ನಾಯಕನನ್ನು ನಿರ್ದೇಶಿಸುವಾಗ ತಾನು ನಾಯಕ ಎಂಬುದನ್ನು ಮರೆಯಲು ಹೇಗೆ ಸಾಧ್ಯ?' ಎಂದು ಪಾರ್ವತಮ್ಮ 2005-06ರಲ್ಲಿ ತನ್ನ ಅಂಕಣದಲ್ಲಿ ಪ್ರಶ್ನಿಸಿದ್ದರು.

ಇದೀಗ ಪುನೀತ್, ತಾನು ಉಪ್ಪಿ ನಿರ್ದೇಶನದಲ್ಲಿ ನಟಿಸಲು ಆಸೆಯಿಂದ ಕಾಯುತ್ತಿದ್ದೇನೆ ಎಂದು ಹೇಳುತ್ತಿರುವುದಕ್ಕೆ ಪಾರ್ವತಮ್ಮ ಏನಂತಾರೋ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments