Webdunia - Bharat's app for daily news and videos

Install App

ಅನ್ಯಾಯದ ವಿರುದ್ಧ ಭುಗಿಲೆದ್ದ ದಿಗ್ಗಜರ ಮಕ್ಕಳು

Webdunia
MOKSHENDRA
ನಟ ದಿಗ್ಗಜರ ಮಕ್ಕಳು ವಾಣಿಜ್ಯ ಮಂಡಳಿ ಬಗ್ಗೆ ಮುನಿಸಿಕೊಂಡಿದ್ದಾರೆ. ನಮ್ಮ ಅಪ್ಪಂದಿರಿಗೆ ಅನ್ಯಾಯವಾಗಿರುವುದೇ ಇವರ ಮುನಿಸಿಗೆ ಕಾರಣ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ನೆನಪಿಗಾಗಿ 75 ಸಾಧಕರ ಕುರಿತು ಪುಸ್ತಕಗಳನ್ನು ಹೊರತಂದಿತ್ತು. ಆದರೆ, ಅದರಲ್ಲಿ ತೂಗುದೀಪ್ ಶ್ರೀನಿವಾಸ್, ಸುಧೀರ್, ಮುಸುರಿ ಕೃಷ್ಣಮೂರ್ತಿ, ದಿನೇಶ್, ಸುಂದರಕೃಷ್ಣ ಅರಸ್, ಮೈಸೂರು ಲೋಕೇಶ್ ಮತ್ತು ಎನ್ಎಸ‌್‌ರಾವ್ ಅವರ ಪುಸ್ತಕಗಳು ಮಾತ್ರ ಬಂದಿರಲಿಲ್ಲ. ಆಗಲೇ ಖಳನಾಯಕರಾಗಿ ನಟಿಸಿ ಖ್ಯಾತಿ ಪಡೆದವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಪಸ್ವರ ಎದ್ದಿತ್ತು. ಆದರೆ ಅದಕ್ಕೆ ಎಲ್ಲಿಂದಲೂ ಪ್ರತಿಕ್ರಿಯೆ ಬರಿದ್ದುದಕ್ಕೆ ಈಗ ಆ ಅಪಸ್ವರ ತಾರಕಕ್ಕೇರಿದೆ. ನಟದಿಗ್ಗಜರ ಮಕ್ಕಳೆಲ್ಲ ಒಂದಾಗಿದ್ದಾರೆ.

ಈಗ ಈ ಬಗ್ಗೆ ನಟ ದರ್ಶನ್ ತೂಗುದೀಪ್ ನೇತೃತ್ವದಲ್ಲಿ ನಾಗೇಂದ್ರ ಅರಸ್, ತರುಣ್ ಸುಧೀರ್, ಗಿರಿ ದಿನೇಶ್, ಜಯಸಿಂಹ ಮುಸುರಿ ಮತ್ತು ಆದಿ ಲೋಕೇಶ್ ಒಟ್ಟುಗೂಡಿ ಕನ್ನಡ ಜನತೆಯ ಮುಂದೆ ಹೋಗಲು ಯೋಚಿಸಿದ್ದಾರೆ. ಮೊದಲು ಈ ಬಗ್ಗೆ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರಿಗೆ ಒಂದಲ್ಲ, ಎರಡಲ್ಲ ಮೂರು ಬಾರಿ ಮನವಿ ಮಾಡಿದ್ದರಂತೆ. ಆದರೆ ಇದುವರೆಗೆ ಸ್ಪಂದಿಸಿಲ್ಲ ಎಂಬುದು ಅವರ ಅಳಲು. "ನಾವೇನು ಕಿರುಚಾಟ ಮಾಡುತ್ತಿರಲಿಲ್ಲ. ಮುಂದಿನ ಕಂತಿನಲ್ಲಿ ಪುಸ್ತಕ ಬರೆಸುತ್ತೇವೆ ಎಂದೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ಮಾತು ಬೇರೆ ಕನಿಷ್ಠ ನಮ್ಮ ಅಳಲನ್ನು ಕೇಳುವ ಸೌಜನ್ಯ ತೋರಲಿಲ್ಲ. ಅಂದ ಮೇಲೆ ಮಂಡಳಿ ಇರುವುದಾದರೂ ಯಾಕೆ?" ಎಂದು ಪ್ರಶ್ನಿಸುತ್ತಾರೆ ನಿರ್ದೇಶಕ ನಾಗೇಂದ್ರ ಅರಸ್. ಇನ್ನಾದರೂ ಇವರ ಅಳಲಿಗೆ ಉತ್ತರ ದೊರೆಯುತ್ತದೋ ಏನೋ...

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments