Webdunia - Bharat's app for daily news and videos

Install App

ಅನುಶ್ರೀಗೆ ಸಿನೆಮಾಗಳಲ್ಲಿ ಅವಕಾಶ

Webdunia
ಬುಧವಾರ, 19 ಜೂನ್ 2013 (13:17 IST)
PR
PR
ಕಿರುತೆರೆಗೆ ಕಾಲಿಟ್ಟದ್ದು ನಿರೂಪಕಿಯಾಗಿ. ಅಲ್ಲಿಂದ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಜವಾಬ್ದಾರಿ ಹೊತ್ತುಕೊಂಡರು. ಬಿಗ್ಬಾಸ್ ಮನೆಗೆ ಓರ್ವ ಸ್ಪರ್ದೆಯಾಗಿ ಸೇರಿಕೊಂಡು ಅಲ್ಲೂ ಸೈ ಎನಿಸಿಕೊಂಡ ಪೋರಿಗೀಗ ಸಿನೆಮಾಗಳಲ್ಲೂ ಅವಕಾಶ ಸಿಕ್ಕಿದೆ. ಬಿಗ್ಬಾಸ್ ಮನೆಯಿಂದ ಹೊರಬಂದ ಕೂಡಲೆ ಹಲವು ಕಮರ್ಷಿಯಲ್ ಚಿತ್ರಗಳ ನಿರ್ಮಾಪಕರು ಅವರನ್ನು ಸಂದರ್ಶಿಸಿದ್ದಾರಂತೆ.

ಮೂಲತಃ ಮಂಗಳೂರಿನ ಈ ಬೆಡಗಿಗೆ ಬರಗೂರು ರಾಮಚಂದ್ರಪ್ಪರ 'ಭೂಮಿತಾಯಿ'ಯಲ್ಲೊಂದು ಗಮನ ಸೆಳೆವ ಪಾತ್ರ ಹಾಗೂ ಶಿವರುದ್ರಯ್ಯರ ಬೆಳ್ಳಿಕಿರಣದಲ್ಲಿ ನಾಯಕಿಯ ಪಾತ್ರ ಸಿಕ್ಕಿದೆ. ಬಿಗ್ಬಾಸ್ ಮನೆಗೆ ಹೊಕ್ಕ ಬಳಿಕ ಸಿಟ್ಟು ಸ್ವಲ್ಪ ಕಡಿಮೆಯಾಗಿದೆ ಎಂದು ಒಪ್ಪಿಕೊಳ್ಳುವ ಅನುಶ್ರೀ ಆ ಮನೆಯಲ್ಲಿ ಹಾವು, ಡೆವಿಲ್ ಎಂದು ಕರೆಯಿಸಿಕೊಂಡಿದ್ದಕ್ಕೆ ಸ್ವಲ್ಪವೂ ಬೇಸರವಿಲ್ಲ ಎನ್ನುತ್ತಾರೆ. ನಾನು ಆ ಮನೆಯ ಒಳ್ಳೆಯ ಮಗಳಾಗಿದ್ದೆ, ತಂಗಿಯಾಗಿದ್ದೆ ಎಂದು ಹೇಳಿ ನಗುತ್ತಾರೆ.

ಮನೆಯಲ್ಲಿದ್ದಾಗ ಟೀವಿ, ಮೊಬೈಲ್, ಲ್ಯಾಪ್ಟಾಪ್ ಬಿಟ್ಟು ಇದ್ದಿದ್ದೇ ಇಲ್ಲ. ಆ ಮನೆಗೆ ಹೊಕ್ಕ ಬಳಿಕ ಅದಾವುದೂ ಅನಿವಾರ್ಯ ಎನಿಸಲಿಲ್ಲ. ಅಮ್ಮ ಮಾತ್ರ ತುಂಬಾ ಮಿಸ್ ಆದ್ರು.
ಅಪ್ಪನ ಪ್ರೀತಿ ಸಿಗದೇ ಹೋಯ್ತು ಎಂಬ ನೋವು ಅವರನ್ನು ಸದಾ ಕಾಡುತ್ತಂತೆ. ಇನ್ನು ಮುಂದೆ ನಾಯಕಿಯಾಗಿ ನನ್ನನ್ನು ಬೆಳ್ಳಿಪರದೆಯಲ್ಲಿ ನೋಡಿ ಎನ್ನುವ ಅನುಶ್ರೀಗೆ ಇನ್ನೂ ಹಲವಾರು ಆಯ್ಕೆಗಳು ಬಂದಿವೆಯಂತೆ. ಕರಾವಳಿಯ ಈ ಪೋರಿಗೆ ಆಲ್ದಿಬೆಸ್ಟ್!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments