Select Your Language

Notifications

webdunia
webdunia
webdunia
webdunia

ಅನುಶ್ರೀಗೆ ಸಿನೆಮಾಗಳಲ್ಲಿ ಅವಕಾಶ

ಅನುಶ್ರೀಗೆ ಸಿನೆಮಾಗಳಲ್ಲಿ ಅವಕಾಶ
ಬೆಂಗಳೂರು , ಬುಧವಾರ, 19 ಜೂನ್ 2013 (13:17 IST)
PR
PR
ಕಿರುತೆರೆಗೆ ಕಾಲಿಟ್ಟದ್ದು ನಿರೂಪಕಿಯಾಗಿ. ಅಲ್ಲಿಂದ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಜವಾಬ್ದಾರಿ ಹೊತ್ತುಕೊಂಡರು. ಬಿಗ್ಬಾಸ್ ಮನೆಗೆ ಓರ್ವ ಸ್ಪರ್ದೆಯಾಗಿ ಸೇರಿಕೊಂಡು ಅಲ್ಲೂ ಸೈ ಎನಿಸಿಕೊಂಡ ಪೋರಿಗೀಗ ಸಿನೆಮಾಗಳಲ್ಲೂ ಅವಕಾಶ ಸಿಕ್ಕಿದೆ. ಬಿಗ್ಬಾಸ್ ಮನೆಯಿಂದ ಹೊರಬಂದ ಕೂಡಲೆ ಹಲವು ಕಮರ್ಷಿಯಲ್ ಚಿತ್ರಗಳ ನಿರ್ಮಾಪಕರು ಅವರನ್ನು ಸಂದರ್ಶಿಸಿದ್ದಾರಂತೆ.

ಮೂಲತಃ ಮಂಗಳೂರಿನ ಈ ಬೆಡಗಿಗೆ ಬರಗೂರು ರಾಮಚಂದ್ರಪ್ಪರ 'ಭೂಮಿತಾಯಿ'ಯಲ್ಲೊಂದು ಗಮನ ಸೆಳೆವ ಪಾತ್ರ ಹಾಗೂ ಶಿವರುದ್ರಯ್ಯರ ಬೆಳ್ಳಿಕಿರಣದಲ್ಲಿ ನಾಯಕಿಯ ಪಾತ್ರ ಸಿಕ್ಕಿದೆ. ಬಿಗ್ಬಾಸ್ ಮನೆಗೆ ಹೊಕ್ಕ ಬಳಿಕ ಸಿಟ್ಟು ಸ್ವಲ್ಪ ಕಡಿಮೆಯಾಗಿದೆ ಎಂದು ಒಪ್ಪಿಕೊಳ್ಳುವ ಅನುಶ್ರೀ ಆ ಮನೆಯಲ್ಲಿ ಹಾವು, ಡೆವಿಲ್ ಎಂದು ಕರೆಯಿಸಿಕೊಂಡಿದ್ದಕ್ಕೆ ಸ್ವಲ್ಪವೂ ಬೇಸರವಿಲ್ಲ ಎನ್ನುತ್ತಾರೆ. ನಾನು ಆ ಮನೆಯ ಒಳ್ಳೆಯ ಮಗಳಾಗಿದ್ದೆ, ತಂಗಿಯಾಗಿದ್ದೆ ಎಂದು ಹೇಳಿ ನಗುತ್ತಾರೆ.

ಮನೆಯಲ್ಲಿದ್ದಾಗ ಟೀವಿ, ಮೊಬೈಲ್, ಲ್ಯಾಪ್ಟಾಪ್ ಬಿಟ್ಟು ಇದ್ದಿದ್ದೇ ಇಲ್ಲ. ಆ ಮನೆಗೆ ಹೊಕ್ಕ ಬಳಿಕ ಅದಾವುದೂ ಅನಿವಾರ್ಯ ಎನಿಸಲಿಲ್ಲ. ಅಮ್ಮ ಮಾತ್ರ ತುಂಬಾ ಮಿಸ್ ಆದ್ರು.
ಅಪ್ಪನ ಪ್ರೀತಿ ಸಿಗದೇ ಹೋಯ್ತು ಎಂಬ ನೋವು ಅವರನ್ನು ಸದಾ ಕಾಡುತ್ತಂತೆ. ಇನ್ನು ಮುಂದೆ ನಾಯಕಿಯಾಗಿ ನನ್ನನ್ನು ಬೆಳ್ಳಿಪರದೆಯಲ್ಲಿ ನೋಡಿ ಎನ್ನುವ ಅನುಶ್ರೀಗೆ ಇನ್ನೂ ಹಲವಾರು ಆಯ್ಕೆಗಳು ಬಂದಿವೆಯಂತೆ. ಕರಾವಳಿಯ ಈ ಪೋರಿಗೆ ಆಲ್ದಿಬೆಸ್ಟ್!

Share this Story:

Follow Webdunia kannada