Webdunia - Bharat's app for daily news and videos

Install App

ಅಂದು ಬಸವಣ್ಣ .. ಆಮೇಲೆ ಸಿಂಬಲ್, ಇಂದು ಶಿವಂ ಇದು ಉಪ್ಪಿ ಸಿನಿಮಾ ಕಥೆ

Webdunia
ಸೋಮವಾರ, 17 ನವೆಂಬರ್ 2014 (11:33 IST)
ಅಂತೂ ಇಂತೂ ಈ ಚಿತ್ರಕ್ಕೊಂದು ಟೈಟಲ್ ಸಿಕ್ಕಿದೆ. ನಿರ್ಮಾಪಕ ಸಿ ಆರ್ ಮನೋಹರ್ ಅವರ ನಿರ್ಮಾಣದ  ಶ್ರೀನಿವಾಸ ರಾಜು ಅವರ ನಿರ್ದೇಶನದ ಮತ್ತು ಉಪೇಂದ್ರ ಅವರ ನಟನೆಯ ಚಿತ್ರಕ್ಕೆ ಟೈಟಲ್ ಸಿಗೋದು ತುಂಬಾ ಕಷ್ಟ ಆಗಿತ್ತು. ಆದರೆ ಈಗ ಆ ಚಿತ್ರಕ್ಕೊಂದು ಶೀರ್ಷಿಕೆ ಸಿಕ್ಕಿದೆ. ಅದರ ಹೆಸರು ಶಿವಂ ಎಂದಾಗಿದೆ. ಅಂತೂ ಇಂತೂ ಚಿತ್ರದ ವಿವಾದ ದೂರಾಗಿದೆ. ಆರಂಭದಲ್ಲಿ ಬ್ರಾಹ್ಮಣ ಎನ್ನುವ ಟೈಟಲ್ ಪಡೆದು ಆನಂತರ ಅದು ಬಸವಣ್ಣ ಎಂದಾಗಿ ಅದಾದ ಬಳಿಕ ಆ ಚಿತ್ರವೂ ಶೀರ್ಷಿಕೆ ರಹಿತವಾಯ್ತು.

ಈಗ ಅದ್ಯಾವುದು ಬೇಡ ಎಂದು ಶ್ರೀನಿವಾಸ ರಾಜು ಮತ್ತೇ ಬಸವಣ್ಣ ಎನ್ನುವ ಹೆಸರೇ ಇಡಲು ನಿರ್ಧರಿಸಿದರು ಅದಕ್ಕೆ ಕಾರಣ ನಾಮದ ಚಿತ್ರ , ಉಪ್ಪಿ ಮೂರು ನಾಮದ ಸಿನಿಮಾ ಹೀಗೆ ಅನೇಕ ರೀತಿ ಜನರು ಕರೆಯುವುದರಿಂದ ಅದರ ಬಗ್ಗೆ ಕೆಟ್ಟ ಪ್ರಚಾರ ಆದಂತಾಗುತ್ತದೆ ಎಂದು ತಿಳಿದ ನಿರ್ದೇಶಕರು ಅಂತಿಮವಾಗಿ ಬಸವಣ್ಣ ಅಂತ ಮತ್ತೆ ಕರೆದರೂ ಅದು ವಿವಾದ ಉಂಟು ಮಾಡಿತ್ತು ಮತ್ತೆ.

ಈಗ ಅಂತಿಮವಾಗಿ ಈ ಚಿತ್ರಕ್ಕೆ ಶಿವಂ ಎನ್ನುವ ಹೆಸರು ಬಂದಿದೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ರಾಗಿಣಿ ದ್ವಿವೇದಿ, ಸಲೋನಿ ಮುಂತಾದವರು ನಟಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments