Webdunia - Bharat's app for daily news and videos

Install App

ಮತ್ತೊಂದು ಕ್ಷೇತ್ರ ಮಹಾತ್ಮೆ 'ಶ್ರೀ ಕೊಟ್ಟೂರು ಬಸವೇಶ್ವರ'

Webdunia
EVENTHOUSE
ಕನ್ನಡ ಚಿತ್ರರಂಗದಲ್ಲಿ ರಾಜ್ಯದ ಹಲವಾರು ಆದಿ ಕ್ಷೇತ್ರಗಳ ಮಹಿಮೆಯನ್ನು ಬೆಳ್ಳಿತೆರೆಯಲ್ಲಿ ತೋರಿಸುವ ಪ್ರಯತ್ನ ಹಿಂದೆಯೂ ಆಗಿತ್ತು ಈಗಲೂ ಮುಂದುವರಿದಿದೆ. 'ಕೈವಾರ', 'ಸಿದ್ಧಗಂಗಾ', 'ಆದಿಚುಂಚನಗಿರಿ' ಕ್ಷೇತ್ರಗಳ ನಂತರ ಈಗ ಶ್ರೀ ಕೊಟ್ಟೂರು ಕ್ಷೇತ್ರ ಹೊಸ ಸೇರ್ಪಡೆ.

ಈ ಕ್ಷೇತ್ರದ ಶ್ರೀ ಬಸವೇಶ್ವರ ಚರಿತ್ರೆಯನ್ನು ತೆರೆಯ ಮೇಲೆ ನಿರೂಪಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಟಿ.ಎನ್.ನಾಗೇಶ್. ಸಿಮ್ರಾನ್ ಮೂವಿ ಮೇಕರ್ಸ್ ಲಾಂಛನದಡಿ ನಿರ್ಮಿಸಲಾಗುತ್ತಿರುವ ಈ ಚಿತ್ರಕ್ಕೆ 'ಶ್ರೀ ಕೊಟ್ಟೂರು ಬಸವೇಶ್ವರ' ಎಂದು ನಾಮಕರಣ ಮಾಡಲಾಗಿದೆ.

ಕೊಟ್ಟೂರು ಕ್ಷೇತ್ರದಲ್ಲಿ ನಡೆದಂತಹ ಮಹಿಮೆಗಳೇ ಚಿತ್ರದ ವಿಶೇಷವಾದರೂ ಯಾವುದೇ ಪವಾಡ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸುವುದಿಲ್ಲವಂತೆ. ವರ್ತಮಾನ ಕಾಲಕ್ಕನುಗುಣವಾಗಿ ವೈಜ್ಞಾನಿಕ ದೃಷ್ಟಿಕೋನದಲ್ಲೇ ನಿರೂಪಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ ನಿರ್ದೇಶಕ ಟಿ.ಎನ್.ನಾಗೇಶ್.

ಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚನೆ ಗೊಟೂರಿ ಅವರದು. 'ನೆನಪಿರಲಿ' ಖ್ಯಾತಿಯ ಪ್ರೇಮ್, 'ಪಯಣ'ದ ರವಿಶಂಕರ್ ಅವರನ್ನು ಚಿತ್ರಕ್ಕೆ ಆರಿಸಿಕೊಳ್ಳುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಷ್ಟೇ ಹೇಳಿದ್ದಾರೆ 'ಪಂಚಾಮೃತ'ದಲ್ಲಿ ಬ್ಯುಸಿಯಾಗಿರವ ನಾಗೇಶ್.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments