Webdunia - Bharat's app for daily news and videos

Install App

'ಬಿಗ್ ಬಾಸ್'ನಲ್ಲಿ ಕಿಚ್ಚ ಸುದೀಪ್ ಕಿಲಕಿಲ; ಸ್ಪರ್ಧಿಗಳು ಫುಲ್ ಖುಷ್

Webdunia
ಮಂಗಳವಾರ, 11 ಜೂನ್ 2013 (14:32 IST)
PR
ಬಿಗ್ ಬಾಸ್' ಮನೆಯೊಳಗೆ ಕಿಚ್ಚ ಸುದೀಪ್ ಪ್ರವೇಶಿಸುತ್ತಾರೆ ಎಂದು ಕೆಲ ದಿನಗಳ ಹಿಂದೆಯೇ ಬಹಿರಂಗವಾಗಿತ್ತು. ಆದರೆ ಯಾವಾಗ ಎಂಬ ಕುತೂಹಲ ತಣಿದಿರಲಿಲ್ಲ. ಅದೀಗ ನಡೆದು ಹೋಗಿದೆ. ಜೂನ್ 10ರಂದು ಪ್ರಸಾರವಾದ ಸಂಚಿಕೆಯಲ್ಲಿ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಇಡೀ ದಿನ ಕಳೆದಿದ್ದಾರೆ!

ಸುದೀಪ್ ಬಿಗ್ ಬಾಸ್ ಮನೆ ಪ್ರವೇಶಿಸಿದ ಉದ್ದೇಶ, ಸ್ಪರ್ಧಿಗಳನ್ನು ಮೋಟಿವೇಟ್ ಮಾಡುವುದು. ಹಾಗಾಗಿ ಮನೆಯೊಳಗಿದ್ದ ಅಷ್ಟೂ ಹೊತ್ತು ಸುದೀಪ್ ಸ್ಪರ್ಧಿಗಳನ್ನು ಖುಷಿಯಾಗಿಡಲು, ಹುರಿದುಂಬಿಸಲು ಕೈಮೀರಿ ಪ್ರಯತ್ನಿಸಿದರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಸ್ಪರ್ಧಿಗಳೀಗ ಗಾಳಿ ತುಂಬಿದ ಬಲೂನುಗಳಂತಾಗಿದ್ದಾರೆ.

ಸ್ವತಃ ಸುದೀಪ್ ಮನೆಯವರಿಗೆ ಅಡುಗೆ ಮಾಡಿದ್ದು ವಿಶೇಷವಾಗಿತ್ತು. ಅದರಲ್ಲೂ ವೆಜ್-ನಾನ್ ವೆಜ್ ವಿಚಾರದ ವಿವಾದಕ್ಕೆ ತನ್ನದೇ ಆದ ರೀತಿಯಲ್ಲಿ ಕಿಚ್ಚ ಪರಿಹಾರ ಒದಗಿಸಿದರು. ನಾನ್ ವೆಜ್ ಮಾಡಿದರೆ ಗುರೂಜಿ ನರೇಂದ್ರ ಶರ್ಮಾ ಕೋಪಗೊಳ್ಳುತ್ತಾರೆ ಎಂಬುದನ್ನು ಸುಳ್ಳು ಮಾಡಿ ತೋರಿಸಿದರು. ಮೊದಲು ನಾನ್ ವೆಜ್ ಅಡುಗೆ ಮಾಡಿ, ನಂತರವಷ್ಟೇ ವೆಜ್ ಮಾಡಿದರು. ಆದರೆ ಗುರೂಜಿಯಿಂದ ಯಾವುದೇ ಆಕ್ಷೇಪ ವ್ಯಕ್ತವಾಗಲಿಲ್ಲ.

ಮನೆಯ ಎಲ್ಲ ಸದಸ್ಯರ ಕುಟುಂಬಿಕರು ಕಳೆದ ವಾರ ಮನೆಗೆ ಬಂದು ಹೋಗಿದ್ದರು. ಇದರಲ್ಲಿ ಮಿಸ್ ಮಾಡಿಕೊಂಡಿದ್ದು ಗುರೂಜಿ ಮಾತ್ರ. ಈ ವಿಚಾರ ಅವರನ್ನು ಕೊರೆಯುತ್ತಲೇ ಇತ್ತು. ಇತ್ತೀಚಿನ ದಿನಗಳಲ್ಲಿ ಗುರೂಜಿ ಮೌನವಾಗಿರುವುದು ಕೂಡ ಚಿಂತೆಗೀಡು ಮಾಡಿತ್ತು. ಈ ಕಾರಣದಿಂದ ಗುರೂಜಿಯನ್ನೇ ಟಾರ್ಗೆಟ್ ಮಾಡಿಕೊಂಡ ಸುದೀಪ್, ಅವರನ್ನು ಹೆಚ್ಚು ರಂಜಿಸಿದರು. ಅವರ ಜತೆ ಹೆಚ್ಚು ಮಾತನಾಡಿ, ಸಮಾಲೋಚನೆ ನಡೆಸಿ ಹುರಿದುಂಬಿಸಿದರು. ಮುಖದಲ್ಲಿ ನಗು ತರಿಸಲು ಯತ್ನಿಸಿದರು.

ಸೈಲೆಂಟ್ ಆಗಿದ್ದ ಗುರೂಜಿ ಪುಟಿದೆದ್ದರು. ಉಳಿದವರೂ ಅಷ್ಟೇ, ಸುದೀಪ್ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮನೆಯವರೊಂದಿಗೆ ಸುದೀಪ್ ಕೂಡ ಮನೆಯವರಾದರು.

ಸುದೀಪ್ ಕೊನೆಗೆ ಕೊಟ್ಟ ಟಾಸ್ಕ್ ಮಜಬೂತಾಗಿತ್ತು. ಕೋಣೆಯಲ್ಲಿ ಬಾಕ್ಸ್ ಇದೆ, ತನ್ನಿ. ಅದರಲ್ಲಿನ ಅಕ್ಷರಗಳನ್ನು ಜೋಡಿಸಿ ಎಂದು ಸ್ಪರ್ಧಿಗಳಿಗೆ ಹೇಳಿದ ಸುದೀಪ್, ಅವರು ಆಚೆ ಹೋಗುತ್ತಿದ್ದಂತೆ ಮನೆಯಿಂದ ಎಸ್ಕೇಪ್ ಆದರು. ವಾಪಸ್ ಬಂದ ಮನೆಯವರಿಗೆ ಅಚ್ಚರಿ. ಎಲ್ಲರೂ ಜೋಲು ಮೋರೆ ಹಾಕಿಕೊಂಡರು. ಆದರೂ ಸುದೀಪ್ ಬಂದು ಹೋಗಿರುವುದರಿಂದ ಟಾನಿಕ್ ಕುಡಿದವರಂತೆ ಮಾನಸಿಕವಾಗಿ ಬಲಿಷ್ಠವಾಗಿದ್ದರು.

ಮನೆಯಿಂದ ಹೊರಗೆ ಬಂದ ಸುದೀಪ್ ಈ ಬಗ್ಗೆ ಟ್ವೀಟ್-ವಾಯ್ಸ್ ರೆಕಾರ್ಡ್ ನೀಡಿದ್ದಾರೆ. ಎಲ್ಲರನ್ನೂ ಮೀಟ್ ಮಾಡಿದ್ದೇನೆ. ಮನೆ ಖಾಲಿ ಖಾಲಿ ಅನ್ನಿಸುತ್ತಿತ್ತು. ಈಗ ಉಳಿದಿರುವುದು ಐದೇ ಜನ. ಅವರ ಖುಷಿಯಲ್ಲಿ ನಾನೂ ಪಾಲ್ಗೊಂಡೆ. ಸಾಕಷ್ಟು ಹುರಿದುಂಬಿಸಲು ಯತ್ನಿಸಿದೆ. ಅವರಿಗಾಗಿ ಅಡುಗೆಯನ್ನು ಮಾಡಿದೆ. ತುಂಬಾ ಸಂತೋಷವಾಯಿತು ಎಂದು ಸುದೀಪ್ ಹೇಳಿಕೊಂಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments