Select Your Language

Notifications

webdunia
webdunia
webdunia
webdunia

ಅವರನ್ನು ನಾನು ಸುಮ್ಮನೆ ಬಿಡಲ್ಲ ಅಂದ್ರು ಕಿಚ್ಚ ಸುದೀಪ್... ಯಾರ ಬಗ್ಗೆ ಹೀಗೆ ಹೇಳಿದ್ದು ?

ಅವರನ್ನು ನಾನು ಸುಮ್ಮನೆ ಬಿಡಲ್ಲ ಅಂದ್ರು ಕಿಚ್ಚ ಸುದೀಪ್... ಯಾರ ಬಗ್ಗೆ ಹೀಗೆ ಹೇಳಿದ್ದು ?
, ಮಂಗಳವಾರ, 1 ಏಪ್ರಿಲ್ 2014 (09:41 IST)
PR
ಇತ್ತೀಚಿಗೆ ಕಿಚ್ಚ ಸುದೀಪ್ ಅವರು ತಮ್ಮ ಹೊಚ್ಚ ಹೊಸ ಚಿತ್ರ ಮಾಣಿಕ್ಯದ ಹಾಡುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎನ್ನುವ ಸಂಗತಿ ಅವರ ಅಭಿಮಾನಿಗಳ ಮುಂದೆ ಇಟ್ಟಿದ್ದರು. ಅದಾದ ಎರಡು ದಿನಗಳ ಬಳಿಕ ಅವರು ಅತ್ಯಂತ ಶಾಕ್ ಆಗಿದ್ದರು.

ಅದಕ್ಕೆ ಕಾರಣ ಅವರ ಈ ಸಿನಿಮಾದ ಹಾಡುಗಳು ಕಾಳಸಂತೆಯವರ ಕೈಗೆ ಸಿಕ್ಕು ಜನರ ಕೈ ಸೇರಿತ್ತು. ಇದರಿಂದ ಶಾಕ್ ಆದ ಕಿಚ್ಚ ಈ ಬಗ್ಗೆ ಕೆಂಡಾಮಂಡಲ ಆದರು. ಅದಾದ ಬಳಿಕ ಅವರು ತಮ್ಮ ಅಭಿಮಾನಿಗಳ ಬಳಿಯಲ್ಲಿ ನೀವು ಈ ಹಾಡುಗಳ ಪೈರಸಿಯನ್ನು ಕೊಳ್ಳದಿರಿ.. ಒರಿಜಿನಲ್ ನಾನು ನಿಮ್ಮ ಬಳಿ ತರುತ್ತಿದ್ದೇನೆ. ಇಂತಹ ಪೈರಸಿ ಜನರನ್ನು ಸುಮ್ಮನೆ ಬಿಡಲ್ಲ. ಈ ಹಾಡುಗಳು ಹೊರ ಬರಲು ಕಾರಣ ಆದವರನ್ನು ಹುಡುಕಿ ಆತನಿಗೆ ಸರಿಯಾದ ಶಾಸ್ತಿ ಮಾಡ್ತೇನೆ ಎಂದಿದ್ದಾರೆ..

Share this Story:

Follow Webdunia kannada