Webdunia - Bharat's app for daily news and videos

Install App

ಕಾಪಿರೈಟ್: ಆಪಲ್ ವಿರುದ್ಧ 10 ಬಿಲಿಯನ್ ಡಾಲರ್ ದಾವೆ ಹೂಡಿದ ಉದ್ಯಮಿ

Webdunia
ಶನಿವಾರ, 2 ಜುಲೈ 2016 (16:21 IST)
ಐಫೋನ್, ಐಪ್ಯಾಡ್ ಮತ್ತು ಐಪೋಡ್‌ಗಳ ಸಾಧನಗಳನ್ನು ಸಿದ್ದಪಡಿಸಲು 1992ರಲ್ಲಿ ನಾನು ಸಿದ್ದಪಡಿಸಿದ್ದ ವಿನ್ಯಾಸವನ್ನು ದೈತ್ಯ ಆಪಲ್ ಕಂಪೆನಿ ಕಳ್ಳತನ ಮಾಡಿದೆ ಎಂದು ಫ್ಲೋರಿಡಾ ಮೂಲದ ಉದ್ಯಮಿಯೊಬ್ಬರು ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ 10 ಬಿಲಿಯನ್ ಡಾಲರ್ ಮೊತ್ತದ ಕೇಸ್ ದಾಖಲಿಸಿದ್ದಾರೆ.  
 
ಕಳೆದ 24 ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ರೀಡಿಂಗ್ ಡೆವೈಸ್(ಇಆರ್‌ಡಿ) ತಂತ್ರಜ್ಞಾನದ ಡ್ರಾಯಿಂಗ್‌‍ಳನ್ನು ಪೇಟೆಂಟ್ ಪಡೆಯಲು ಯುಎಸ್ ಕಾಪಿರೈಟ್ ಆಫೀಸ್‌ನಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದಲೇ ಆಪಲ್ ಸಂಸ್ಥೆ ನನ್ನ ತಂತ್ರಜ್ಞಾನವನ್ನು ಕಳ್ಳತನ ಮಾಡಿದೆ ಎಂದು ಉದ್ಯಮಿ ಥಾಮಸ್.ಎಸ್.ರೋಸ್ ಆರೋಪಿಸಿದ್ದಾರೆ.    
 
ಆಪಲ್ ಐಪೋನ್, ಐಪ್ಯಾಡ್ ಮತ್ತು ಐಪೋಡ್ ಆವೃತ್ತಿಯ ಪೋನ್‌ಗಳು ಸಿದ್ಧಗೊಳ್ಳುವ ಮುಂಚೆಯೇ, ಉದ್ಯಮಿ ಥಾಮಸ್.ಎಸ್.ರೋಸ್, ಎಲೆಕ್ಟ್ರಾನಿಕ್ ರೀಡಿಂಗ್ ಡೆವೈಸ್(ಇಆರ್‌ಡಿ) ತಂತ್ರಜ್ಞಾನದ ಡ್ರಾಯಿಂಗ್‌‍ಳನ್ನು ಪೇಟೆಂಟ್ ಪಡೆಯಲು ಯುಎಸ್ ಕಾಪಿರೈಟ್ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಸಾಬೀತಾಗಿದೆ.
 
ಉದ್ಯಮಿ ಥಾಮಸ್.ಎಸ್.ರೋಸ್ ಸಿದ್ಧಪಡಿಸಿರುವ ತಾಂತ್ರಿಕ ವಿನ್ಯಾಸ, ಕೇವಲ ಸುದ್ದಿ ಲೇಖನ ಮತ್ತು ಇಮೇಜ್ ಮತ್ತು ವೀಡಿಯೊಗಳನ್ನು ನೋಡಲು ಮಾತ್ರ ಸೀಮಿತವಾಗಿತ್ತು ಎಂದು ಗಾರ್ಡಿಯನ್ ಮಾಧ್ಯಮ ವರದಿ ಮಾಡಿದೆ. 
 
ಥಾಮಸ್.ಎಸ್.ರೋಸ್ ಅವರು ತಮ್ಮ ಡ್ರಾಯಿಂಗ್‌‍ಳ ಪೇಟೆಂಟ್ ಪಡೆಯಲು 1995 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದರ ಶುಲ್ಕ ಬರಿಸಲು ಅವರ ಬಳಿ ಹಣವಿಲ್ಲದ ಕಾರಣ ಅವರ ಅರ್ಜಿ ತಿರಸ್ಕಾರಗೊಂಡಿತ್ತು. ತದನಂತರ, 2014 ರಲ್ಲಿ ಅವರು ಪೇಟೆಂಟ್ ಪಡೆಯಲು ಮತ್ತೆ ಮರು ಅರ್ಜಿ ಸಲ್ಲಿಕೆ ಮಾಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಸತ್‌ ಕ್ಯಾಂಟೀನ್‌ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಮೆನುವಿನಲ್ಲಿ ಭಾರೀ ಬದಲಾವಣೆ ತಂದ ಸ್ಪೀಕರ್‌

ಒಡಿಶಾ, ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರತಿಭಟನಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗ

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ

Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ

ಬಿಜೆಪಿ, ಜೆಡಿಎಸ್ ಬೆಂಗಳೂರಿನ ಪರಿಸರ ಹಾಳು ಮಾಡುತ್ತಿದೆ: ರಣದೀಪ್ ಸುರ್ಜೇವಾಲ

ಮುಂದಿನ ಸುದ್ದಿ
Show comments