Webdunia - Bharat's app for daily news and videos

Install App

ದೇಶದಲ್ಲಿರುವ ಕಪ್ಪು ಹಣ ಬಯಲಿಗೆಳೆಯಲು ಕ್ರಮಕ್ಕೆ ಸಲಹೆ

Webdunia
ಸೋಮವಾರ, 25 ಮೇ 2015 (17:34 IST)
ಸ್ಥಳೀಯವಾಗಿ  ಕಪ್ಪು ಹಣ ಬಯಲಿಗೆಳೆಯಲು ಆದಾಯ ತೆರಿಗೆ ಇಲಾಖೆಯು ಕ್ರಮ ಕೈಗೊಳ್ಳಬೇಕು ಮತ್ತು ಪಾಂಝಿ ಯೋಜನೆಗಳು, ನಕಲಿ ಐಪಿಒ ಮತ್ತಿತರ ಹಣವನ್ನು ಸಂಗ್ರಹಿಸುವ ಅಕ್ರಮ ಮಾರ್ಗಗಳ ಬಗ್ಗೆ ಸೂಕ್ಷ್ಮ ನಿಗಾವಹಿಸಬೇಕು ಎಂದು ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ. 
 
ವಿದೇಶಗಳಲ್ಲಿ ಮತ್ತು ದೇಶದ ಒಳಗೆ ಕಪ್ಪು ಹಣದ ಪಿಡುಗಿನ ನಿವಾರಣೆಗೆ ಹೋರಾಟಕ್ಕೆ ಸರ್ಕಾರ ಸಂಕಲ್ಪಿಸಿದೆ ಎಂದು ಕಂದಾಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೇಳಿದರು. 
 
ವಿದೇಶದಲ್ಲಿರುವ ಕಪ್ಪು ಹಣವನ್ನು ನಿಭಾಯಿಸಲು ಸಂಸತ್ತು ಇತ್ತೀಚೆಗೆ ಕಪ್ಪು ಹಣ( ಬಹಿರಂಗ ಮಾಡದ ವಿದೇಶಿ ಆದಾಯ ಮತ್ತು ಆಸ್ತಿ) ಮತ್ತು ತೆರಿಗೆ ಮಸೂದೆ 2015ರ ಜಾರಿಯನ್ನು ಅಂಗೀಕರಿಸಿದೆ.
 
ಸ್ಥಳೀಯ ಕಪ್ಪು ಹಣಕ್ಕೆ ಸಮಾನ ಮಹತ್ವವನ್ನು ಎಲ್ಲಾ ಅಧಿಕಾರಿಗಳು ನೀಡುವುದು ಗುರಿಯಾಗಿದೆ. ಪಾಂಝಿ ಯೋಜನೆಗಳಿದ್ದರೆ ನಾವು ಎಚ್ಚರವಹಿಸಬೇಕು ಮತ್ತು ನಿಯಂತ್ರಣವಿಲ್ಲದ ಕೆಲವು ಯೋಜನೆಗಳು ದೇಶದ ಬಡವರನ್ನು ವಂಚಿಸುವುದಾಗಿದ್ದರೆ  ಎಚ್ಚರವಹಿಸಬೇಕು ಎಂದು ದಾಸ್ ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments