Webdunia - Bharat's app for daily news and videos

Install App

ಬೇಸಿಗೆ ಇಫೆಕ್ಟ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಎಳೆನೀರು, ನಿಂಬೆ ಹಣ್ಣಿನ ಬೆಲೆ

Krishnaveni K
ಸೋಮವಾರ, 29 ಏಪ್ರಿಲ್ 2024 (11:42 IST)
ಬೆಂಗಳೂರು: ಬೇಸಿಗೆಯ ದಾಹ ತಾಳಲಾರದೇ ರಾಜ್ಯ ರಾಜಧಾನಿಯಲ್ಲಿ ಜನ ಎಳೆನೀರು, ಜ್ಯೂಸ್ ಸೆಂಟರ್ ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದರ ಬೆನ್ನಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ.

ಎಳೆನೀರು, ನಿಂಬೆ ಹಣ್ಣಿನ ಬೆಲೆ ಇದೀಗ ಗಗನಕ್ಕೇರಿದೆ. ಬೇಸಿಗೆ ಆರಂಭಕ್ಕೆ ಮುನ್ನ ಎಳೆ ನೀರಿನ ಬೆಲೆ ಬೆಂಗಳೂರಿನಲ್ಲಿ 40 ರೂ.ವರೆಗಿತ್ತು. ಬೇಸಿಗೆ ಆರಂಭವಾದ ಬಳಿಕ 45 ರೂ.ಗೆ ಏರಿಕೆಯಾಗಿತ್ತು. ಹಾಗಿದ್ದರೂ ಬೇಸಿಗೆಯ ದಾಹ ತಾಳಲಾರದೇ ಜನ ಎಳೆನೀರು ಖರೀದಿ ಮಾಡುತ್ತಿದ್ದರು.

ಕೇವಲ ನೀರು ಮಾತ್ರವಿರುವ ಎಳೆನೀರಿನ ಬೆಲೆ ತೀರಾ ಇತ್ತೀಚೆಗಿನವರೆಗೂ ಹಲವೆಡೆ 40 ರೂ. ಆಗಿತ್ತು. ಆದರೆ ಇದೀಗ ಈ ವಾರದಿಂದ ಬೆಲೆ ದಿಡೀರ್ ಏರಿಕೆಯಾಗಿತ್ತು. 45 ರೂ.ಗಳಿದ್ದ ಎಳೆನೀರಿನ ಬೆಲೆ 50 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ವ್ಯಾಪಾರಿಯೊಬ್ಬರನ್ನು ಕೇಳಿದರೆ ಇತ್ತೀಚೆಗೆ ನಮಗೆ ಕಾಯಿಯೇ ಸಿಗ್ತಾ ಇಲ್ಲ ಏನು ಮಾಡೋಣ ಎನ್ನುತ್ತಿದ್ದಾರೆ.

ಬೆಂಗಳೂರಿಗೆ ಸಾಮಾನ್ಯವಾಗಿ ಮೈಸೂರು, ಮಂಡ್ಯ, ಮದ್ದೂರು ಭಾಗದಿಂದ ಎಳೆನೀರು ಬರುತ್ತದೆ. ಅದೂ ಎರಡು-ಮೂರು ದಿನಕ್ಕೊಮ್ಮೆ ಸ‍ಪ್ಲೈ ಆಗುತ್ತದೆ. ಆದರೆ ಇತ್ತೀಚೆಗೆ ಬೇಡಿಕೆ ಹೆಚ್ಚಾದಂತೆ ಕಾಯಿ ಬರುವುದು ಕಡಿಮೆಯಾಗಿದೆ. ಜೊತೆಗೆ ಬೆಲೆಯೂ ಜಾಸ್ತಿಯಾಗಿದೆ. ವ್ಯಾಪಾರಿಗಳಿಗೆ ಸರಿ ಸುಮಾರು ಒಂದು ಕಾಯಿಗೆ 7 ರೂ.ಗಳಷ್ಟೇ ಲಾಭ ಸಿಗುತ್ತಿದೆ. ಗ್ರಾಹಕರ ಕೈಗೆ 50 ರೂ.ಗೆ ನೀಡಲಾಗುತ್ತಿದೆ.

ಇನ್ನು, ನಿಂಬೆ ಹಣ್ಣಿನ ಕತೆಯೂ ಇದೇ. ಕೆಲವು ಸಮಯದ ಹಿಂದೆ 3 ನಿಂಬೆ ಹಣ್ಣಿಗೆ 10 ರೂ. ಗೆ ಸಿಗುತ್ತಿತ್ತು. ಆದರೆ ಈಗ ಎಳೆಯ ಮತ್ತು ಚಿಕ್ಕ ಗಾತ್ರದ ಒಂದು ನಿಂಬೆ ಹಣ್ಣಿಗೆ 5 ರೂ.ವರೆಗೆ ಬಂದು ತಲುಪಿದೆ. ಬೇಸಿಗೆಯಲ್ಲಿ ನಿಂಬೆ ಪಾನಕ ಮಾಡುವವರ ಸಂಖ್ಯೆ ಹೆಚ್ಚು. ಹೀಗಾಗಿ ನಿಂಬೆಯ ಬೆಲೆಯೂ ಗಗನಕ್ಕೇರಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments