Webdunia - Bharat's app for daily news and videos

Install App

ಟಾಟಾ ಡೊಕೊಮೊ: 'ಮೈ ಬೆಸ್ಟ್ ಆಫರ್' ಯೋಜನೆ ಬಿಡುಗಡೆ

Webdunia
ಗುರುವಾರ, 27 ಅಕ್ಟೋಬರ್ 2016 (09:44 IST)
ಬೆಂಗಳೂರು: ದೇಶದ ಮುಂಚೂಣಿ ಟೆಲಿಕಾಂ ಸಂಸ್ಥೆ ಟಾಟಾ ಡೊಕೊಮೊ ಕರ್ನಾಟಕ ಮಾರುಕಟ್ಟೆಯ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಒಂದು ವಿನೂತನವಾದ ಡಾಟಾ ಯೋಜನೆ ಪ್ರಕಟಿಸಿದೆ. ಮೈ ಬೆಸ್ಟ್ ಆಫರ್(ಎಂಬಿಒ) ಎಂಬ ಈ ಯೋಜನೆಯಡಿ ಪ್ರತಿ ಒಂದು ಜಿಬಿಗೆ 91 ರೂಪಾಯಿಯಿಂದ ಆರಂಭವಾಗುವ ಡಾಟಾ ಪ್ಯಾಕ್ ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವುದೇ ಗೌಪ್ಯ ಶುಲ್ಕ ಅಥವಾ ಇನ್ನಾವುದೇ ಶುಲ್ಕ ಇರುವುದಿಲ್ಲ.
ಗ್ರಾಹಕರು 91 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ 1 ಜಿಬಿ ಡಾಟಾ ಪಡೆಯಲಿದ್ದಾರೆ. ಅದೇ ರೀತಿ, 182 ರೂಪಾಯಿಗಳಿಗೆ 2 ಜಿಬಿ ಮತ್ತು 273 ರೂಪಾಯಿಗೆ 3 ಜಿಬಿ ಡಾಟಾ ಪಡೆಯಬಹುದಾಗಿದೆ. ಈ ಹೊಸ ಸೇವೆಗಳ ಮಾಹಿತಿಗಾಗಿ ಗ್ರಾಹಕರು *123# ಗೆ ಕರೆ ಮಾಡಬಹುದಾಗಿದೆ.
 
'ಗುಣಮಟ್ಟದ ಡಾಟಾ ಸೇವೆಗಳಿಗೆ ಹೆಚ್ಚಿದ ಬೇಡಿಕೆ ಪರಿಣಾಮ ಮಾರುಕಟ್ಟೆಯಲ್ಲಿ ಕೆಲವೊಂದು ಗೌಪ್ಯ ದರಗಳೂ ಒಳಗೊಂಡಂತೆ ಡಾಟಾ ಉತ್ಪನ್ನಗಳ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ. ಆದರೆ, ಟಾಟಾ ಡೊಕೊಮೊ ಪಾರದರ್ಶಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರಲ್ಲಿ ಬದ್ಧತೆ, ವಿಶ್ವಾಸವನ್ನೂ ಹೊಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ಗೌಪ್ಯ ಶುಲ್ಕಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ ಅಥವಾ ಆತಂಕಪಡಬೇಕಿಲ್ಲ. ಈ ಹೊಸ ಡಾಟಾ ಆಫರ್ ನಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡ ಪ್ಲಾನ್ ಗೆ ಅನುಗುಣವಾಗಿ ಡಾಟಾ ಪಡೆಯಲಿದ್ದಾರೆ. ಈ ನಮ್ಮ ಹೊಸ ಡಾಟಾ ಯೋಜನೆಯಿಂದ ಗ್ರಾಹಕರು ಸಂತುಷ್ಟರಾಗುತ್ತಾರೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಟೆಲಿ ಸರ್ವಿಸಸ್ ಲಿಮಿಟೆಡ್ ನ ಕರ್ನಾಟಕ-ಕೇರಳ ವೃತ್ತದ ಗ್ರಾಹಕ ವ್ಯವಹಾರಗಳ ಮುಖ್ಯಸ್ಥ ಬಾಲಾಜಿ ಪ್ರಕಾಶ್ ಹೇಳುತ್ತಾರೆ.
 
ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಇಂಟರ್ನೆಟ್ ಬಳಕೆ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅನುಗುಣವಾಗಿ ಅವರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಟಾಟಾ ಡೊಕೊಮಾ ಆವಿಷ್ಕಾರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಕಂಪನಿ ಕೈಗೆಟುಕುವ ದರದಲ್ಲಿ ವಾಯ್ಸ್ ಪ್ಲಾನ್, ಡಾಟಾ ಪ್ಲಾನ್, ಮೌಲ್ಯಕ್ಕೆ ತಕ್ಕಂತೆ ಕಾಂಬೋ ಪ್ಯಾಕ್, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ವಿಶೇಷ ಯೋಜನೆಗಳು, ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಈ ಎಲ್ಲಾ ಸೇವೆಗಳು ಗ್ರಾಹಕ ಸ್ನೇಹಿಯಾಗಿದ್ದು, ಪ್ರತಿಯೊಬ್ಬ ಗ್ರಾಹಕರ ಹಿತವನ್ನು ಕಾಯುವಂತಹ ಯೋಜನೆಗಳಾಗಿವೆ ಎಂದು ಟಾಟಾ ಡೊಕೋಮೊ ಮುಖ್ಯಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments