1,000ಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ ವಿಶೇಷ ತಂಡ ಮಂಗಳವಾರ ಸಿಂಡಿಕೇಟ್ ಬ್ಯಾಂಕ್ ನ ದೆಹಲಿ, ಜೈಪುರ ಹಾಗೂ ಉದಯಪುರ ಶಾಖೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
ನಕಲಿ ಬಿಲ್ ಮತ್ತು ಅಸ್ತಿತ್ವವಿಲ್ಲದ ಜೀವವಿಮಾ ಪಾಲಿಸಿಗಳಿಗೆ ಓವರ್ ಡ್ರಾಫ್ಟ್ ನೀಡಿದ ವಂಚನೆ ಬ್ಯಾಂಕ್ ಮೇಲಿದೆ.
ಬ್ಯಾಂಕ್ ಅಧಿಕಾರಿಗಳು ಶಾಮೀಲಾಗದೆ ಇಂತಹ ವಂಚನೆ ನಡೆಸುವುದು ಸಾಧ್ಯವಿಲ್ಲ. 2011ರಿಂದಲೇ ಈ ವಂಚನೆ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನೀಡಲು ಸಿಂಡಿಕೇಟ್ ಬ್ಯಾಂಕ್ ನಿರಾಕರಿಸಿದೆ.