Webdunia - Bharat's app for daily news and videos

Install App

ಮದ್ಯದೊರೆ ಮಲ್ಯ ಜೀವನದ ಏರಿಳಿತಗಳು

Webdunia
ಮಂಗಳವಾರ, 8 ಮಾರ್ಚ್ 2016 (15:32 IST)
ನವದೆಹಲಿ‌: ಸದ್ಯ ದಿವಾಳಿ ಹೊಂದಿರುವ ಖ್ಯಾತ ಉದ್ಯಮಿ ವಿಜಯ್ ಮಲ್ಯ, ಭಾರತ ಬಿಡದಂತೆ ತಡೆ ಕೋರಿ ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಒಕ್ಕೂಟ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಈ ಮನವಿಯನ್ನು ಸ್ವೀಕರಿಸಿರುವ ಸುಪ್ರೀಂ ನಾಳೆ ಈ ಕುರಿತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. 
ಸಾರ್ವಜನಿಕ ವಲಯದ ಬ್ಯಾಂಕುಗಳು ಪರವಾಗಿ ಕೋರ್ಟ್‌ಗೆ ಹಾಜರಾಗಲಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ತುರ್ತು ವಿಚಾರಣೆ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
 
ಎಸ್‌ಬಿಐ ಸೇರಿದಂತೆ, ಮಲ್ಯ ಸಾಲ ಮರುಪಾವತಿಯನ್ನು ಉಳಿಸಿಕೊಂಡಿರುವ 17 ವಿವಿಧ ಬ್ಯಾಂಕುಗಳು ಕೋರ್ಟ್ ಮೆಟ್ಟಿಲೇರಿವೆ. ಈ ಬ್ಯಾಂಕುಗಳಲ್ಲಿ ಮದ್ಯದ ದೊರೆ ಸಾವಿರಾರಿ ಕೋಟಿಯಷ್ಟು ಸಾಲ ಪಡೆದಿದ್ದಾರೆಂದು ಮುಕುಲ್ ರೋಹಟ್ಗಿ  ತಿಳಿಸಿದ್ದಾರೆ.
 
ಎಸ್‌ಬಿಐ ದಾಖಲಿಸಿದ ಹಣ ದುರುಪಯೋಗ ದೂರು ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ ದೂರುಗಳು ಇತ್ಯರ್ಥವಾಗುವವರೆಗೆ ಯುಬಿ ಕಂಪೆನಿ ಮುಖ್ಯಸ್ಥ ಡಿಯಾಗೋ ಅವರಿಂದ ವಿಜಯ್ ಮಲ್ಯ 515 ಕೋಟಿ ರೂಪಾಯಿ ಹಣ ಪಡೆಯುವಂತಿಲ್ಲ ಎಂದು ಸಾಲ ವಸೂಲಾತಿ ಪ್ರಾಧಿಕಾರ ಕಟ್ಟು ನಿಟ್ಟಿನ ಆದೇಶ ನೀಡಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments