Select Your Language

Notifications

webdunia
webdunia
webdunia
webdunia

3 ಕೋಟಿ ಕೊಡುವುದಿರಲಿ, ನಿಗದಿಯಾದ 2 ಕೋಟಿ ಬಿಡುಗಡೆ ಮಾಡಿ: ವೈಎಸ್‌ವಿ ದತ್ತಾ

3 ಕೋಟಿ ಕೊಡುವುದಿರಲಿ, ನಿಗದಿಯಾದ 2 ಕೋಟಿ ಬಿಡುಗಡೆ ಮಾಡಿ: ವೈಎಸ್‌ವಿ ದತ್ತಾ
ಬೆಂಗಳೂರು , ಬುಧವಾರ, 4 ಮಾರ್ಚ್ 2015 (11:13 IST)
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 5 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಎಲ್ಲಾ ಶಾಸಕರು ಒತ್ತಾಯಿಸಿದ್ದಾರೆ.  ಎಲ್ಲಾ ಶಾಸಕರು ಪಕ್ಷಾತೀತವಾಗಿ ಈ ಒತ್ತಾಯ ಮಾಡಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು  3ಕೋಟಿ ರೂ. ಕೊಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಆದರೆ ಪ್ರದೇಶಾಭಿವೃದ್ಧಿ ನಿಧಿ ಇದಕ್ಕೆ ಮುಂಚೆ ನಿಗದಿಯಾಗಿದ್ದ 2 ಕೋಟಿಯನ್ನೂ ಕೊಡದೇ ಬರೀ ಒಂದು ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಈ ಕುರಿತು ಜೆಡಿಎಸ್ ಶಾಸಕ ವೈಎಸ್‌ವಿ ದತ್ತಾ ಹೇಳಿದ್ದಾರೆ.

ಹೆಚ್ಚಿನ ಹಣ ಕೊಡುವುದು ಇರಲಿ, ನಿಗದಿಯಾಗಿದ್ದ 2 ಕೋಟಿಯನ್ನು ಇನ್ನೂ ನೀಡಿಲ್ಲ ಎಂದು ಅವರು ದೂರಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಳೆದ ವರ್ಷ ಒಂದು ಕೋಟಿಯಿಂದ ಎರಡು ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಇದುವರಿಗೆ ಬರೀ ಒಂದು ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ ಒಂದು ಕೋಟಿಯನ್ನು ಶಾಸಕರಿಗೆ ಬಿಡುಗಡೆ ಮಾಡಿಲ್ಲವೆಂದು ಹೇಳಲಾಗುತ್ತಿದೆ. 

Share this Story:

Follow Webdunia kannada