Webdunia - Bharat's app for daily news and videos

Install App

ಪೇಟಿಎಂ ಪೇಮೆಂಟ್ ಬಾಂಕ್ ಗಡುವು ವಿಸ್ತರಣೆ ಮಾಡಿದ ಆರ್ ಬಿಐ: ಇಲ್ಲಿದೆ ಮಾಹಿತಿ

Krishnaveni K
ಶನಿವಾರ, 17 ಫೆಬ್ರವರಿ 2024 (15:13 IST)
Photo Courtesy: Twitter
ನವದೆಹಲಿ: ಪೇಟಿಎಂ ಪೇಮೆಂಟ್ ಬಾಂಕ್ ಕಾರ್ಯಚಟುವಟಿಕೆ ಸ್ಥಗಿತಕ್ಕೆ ಈ ಮೊದಲು ನೀಡಲಾಗಿದ್ದ ಫೆಬ್ರವರಿ 29 ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿಸ್ತರಣೆ ಮಾಡಿದೆ.

ಇದೀಗ ಹೊಸದಾಗಿ ಮಾರ್ಚ್ 15 ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಮಾರ್ಚ್ 15 ರೊಳಗಾಗಿ ಪೇಮೆಂಟ್ ಬ್ಯಾಂಕ್‍ ನ ಚಟುವಟಿಕೆಗಳನ್ನು ಬಂದ್ ಮಾಡಲು ಆರ್ ಬಿಐ ಹೊಸ ಆದೇಶ ಮಾಡಿದೆ. ಈ ಮೊದಲು ನೀಡಲಾಗಿದ್ದ ಫೆಬ್ರವರಿ 29 ರ ಗಡುವು ವಿಸ್ತರಣೆ ಮಾಡುವಂತೆ ಪೇಟಿಎಂ ಮನವಿ ಮಾಡಿತ್ತು. ಅನೇಕ ಗ್ರಾಹಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದ್ದರಿಂದ ಗಡುವು ವಿಸ್ತರಣೆ ಮಾಡಲಾಗಿದೆ. ಅನೇಕರು ವೇತನ, ಸರಕಾರೀ ಸಬ್ಸಿಡಿಗಳಿಗೆ ಪೇಟಿಎಂ ಬ್ಯಾಂಕ್ ಖಾತೆಯನ್ನು ಅವಲಂಬಿಸಿದ್ದರು. ಅವರೆಲ್ಲರಿಗೂ ಬದಲಿ ವ್ಯವಸ್ಥೆ ಮಾಡಲು ಸಮಯ ನೀಡಬೇಕು ಎಂದು ಪೇಟಿಎಂ ಮನವಿ ಮಾಡಿತ್ತು.

ಪೇಟಿಎಂ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧಕ್ಕೆ ಕಾರಣವೇನು?
ಪೇಟಿಎಂ ಪೇಮೆಂಟ್ ಬ್ಯಾಂಕ್ ಸೂಕ್ತ ದೃಢೀಕರಣ ದಾಖಲೆಗಳಿಲ್ಲದೇ ನೂರಾರು ಖಾತೆ ಸೃಷ್ಟಿಸಿದ್ದು ಆರ್ ಬಿಐ ನಿರ್ಬಂಧ ಹೇರಲು ಪ್ರಮುಖ ಕಾರಣವಾಗಿದೆ. ಸಮರ್ಪಕ ಕೆವೈಸಿ ಇಲ್ಲದೇ ಕೋಟ್ಯಾಂತರ ರೂಪಾಯಿ ಹಣ ವ್ಯವಹಾರ ನಡೆಯುತ್ತಿತ್ತು. ಇದು ಅಕ್ರಮ ಹಣ ವ್ಯವಹಾರಕ್ಕೆ ದಾರಿಯಾಗಿತ್ತು. ಒಂದೇ ಪ್ಯಾನ್ ಖಾತೆ ನಂಬರ್ ಜೋಡಿಸಿ ಹಲವು ಬಳಕೆದಾರರು ಖಾತೆ ತೆರೆದಿರುವುದೂ ಬೆಳಕಿಗೆ ಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣವರ್ಗಾವಣೆಗೆ ಬಳಕೆ ಮಾಡಿಕೊಂಡಿರಬಹುದು ಎಂಬ ಅನುಮಾನ ಆರ್ ಬಿಐಗಿದೆ. ಈ ಬಗ್ಗೆ ಈಗಾಗಲೇ ಆರ್ ಬಿಐ ಲೆಕ್ಕ ಪರಿಶೋಧಕರು ತನಿಖೆ ನಡೆಸಿ ಅಕ್ರಮ ಕಂಡಕೊಂಡಿದ್ದಾರೆ. ಹೀಗಾಗಿ ಈ ವರದಿಗಳನ್ನು ಜಾರಿ ನಿರ್ದೇಶನಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಗಳಿಗೆ ನೀಡಿದೆ. ಅಕ್ರಮ ಚಟುವಟಿಕೆಯ ಪುರಾವೆ ಕಂಡುಬಂದಲ್ಲಿ ಪೇಟಿಎಂ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

Animal Attack: MPಯ ಬರ್ವಾನಿಯಲ್ಲಿ 6ಮಂದಿ ಸಾವು, ಹಲವರಿಗೆ ಗಾಯ

Pakistan: ಗನ್‌ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ

RCB Victory Parade: ಕಾಲ್ತುಳಿತದಲ್ಲಿ ಮೂವರು ಫ್ಯಾನ್ಸ್ ಸಾವು, ಹಲವು ಮಂದಿಗೆ ಗಾಯ

ಮುಂದಿನ ಸುದ್ದಿ
Show comments