Webdunia - Bharat's app for daily news and videos

Install App

ಮೊಬೈಲ್‌ನಲ್ಲಿ ಪ್ಯಾನಿಕ್ ಬಟನ್: ಮೊಬೈಲ್ ಕಂಪೆನಿಗಳೊಂದಿಗೆ ಸಚಿವ ಪ್ರಸಾದ್ ಚರ್ಚೆ

Webdunia
ಶುಕ್ರವಾರ, 29 ಏಪ್ರಿಲ್ 2016 (16:21 IST)
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಸಂದರ್ಭಕ್ಕೆ ಸಹಾಯಕವಾಗುವಂತೆ ಪ್ಯಾನಿಕ್ ಬಟನ್‌ ಅಳವಡಿಕೆ ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ದರ ಹೆಚ್ಚಳವಾಗಲಿದ್ದು, ಮೊಬೈಲ್ ಉತ್ಪಾದಕ ಕಂಪೆನಿಗಳೊಂದಿಗೆ ಚರ್ಚಿಸುವುದಾಗಿ ಟೆಲಿಕಾಂ ಖಾತೆ ಸಚಿವ ಶಂಕರ್ ಪ್ರಸಾದ್ ಹೇಳಿದ್ದಾರೆ
ನಾನು ಮೊಬೈಲ್ ಉತ್ಪಾದಕ ಸಂಸ್ಥೆಗಳ ಜೊತೆಯಲ್ಲಿ ಮಾತನಾಡುತ್ತೇನೆ. ಭಾರತ ದೇಶ ಅತಿದೊಡ್ಡ ಸ್ಮಾರ್ಟ್‌ಪೋನ್ ಮಾರುಕಟ್ಟೆಯನ್ನು ಹೊಂದಿದೆ. ಸಲಹೆಗಳ ಮೇರೆಗೆ ಎಲ್ಲ ಸ್ಮಾರ್ಟ್‌ಪೋನ್ ಉತ್ಪಾದಕ ಸಂಸ್ಥೆಗಳ ಜೊತೆ ಚರ್ಚೆ ನಡೆಸಿರುವೆ. ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಾಮಾಜಿಕ ನ್ಯಾಯ ಮತ್ತು ಮಹಿಳೆಯರು ಭದ್ರತಾ ಹಿತದೃಷ್ಟಿಯಿಂದ ಬೆಂಬಲ ನೀಡುತ್ತವೆ ಎಂದು ಶಂಕರ್ ಪ್ರಸಾದ ನಿರೀಕ್ಷೆ ವ್ಯಕ್ತವಡಿಸಿದ್ದಾರೆ.
 
ಮುಂದಿನ ವರ್ಷ ಜನವರಿಯಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಸಂದರ್ಭಕ್ಕೆ ಸಹಾಯಕವಾಗುವಂತೆ ಪ್ಯಾನಿಕ್ ಬಟನ್‌ನ್ನು ಅಳವಡಿಕೆ ಕಡ್ಡಾಯ ಎಂದು ಸರಕಾರ ಆದೇಶ ಹೊರಡಿಸಿದೆ. 
 
ಪ್ಯಾನಿಕ್ ಬಟನ್ ಎಂದರೆ, ಪೋನ್‌ಗಳ ಮೇಲೆ ಸುರಕ್ಷತೆ ಒಂದು ಬಟನ್ ಅಳವಡಿಸುವುದು, ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾಗ ಅಥವಾ ಯಾರಾದರೂ ಕಿರುಕುಳ ನೀಡುವ ಸಂದರ್ಭದಲ್ಲಿ ಪ್ಯಾನಿಕ ಬಟನ್‌ನ್ನು ಪ್ರೆಸ್ ಮಾಡಿದರೆ ಸಾಕು, ಸ್ಥಳೀಯ ಪೋಲಿಸ್ ಠಾಣೆ ಅಥವಾ ತನ್ನ ಕುಟುಂಬದ ಶಿಫಾರಸಿನ್ನ ಸಂಖ್ಯೆಗೆ ಸ್ವಯಂ ಚಾಲಿತವಾಗಿ ಸಂದೇಶ ರವಾನೆಯಾಗುತ್ತದೆ. ಈ ಯೋಜನೆ 2017 ರ ಜನವರಿ ತಿಂಗಳಿಂದ ಜಾರಿಗೆ ಬರಲಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಗಂದೂರು ಸೇತುವೆ ಉದ್ಘಾಟನೆಗೆ ಆಹ್ವಾನ ಸಿಕ್ಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೆಟ್ಟಿಗರ ಪ್ರಶ್ನೆ

ಸಿಎಂ ಕುರ್ಚಿ ವಿಚಾರ ಬಿಜೆಪಿಗೆ ಸಂಬಂಧಿಸಿದ್ದಲ್ಲ: ಸಂತೋಷ ಲಾಡ್‌

ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂಧೂರ ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ

ದೇಶದ ಅತಿ ಉದ್ದದ ಸಿಗಂದೂರು ಸೇತುವೆ ಲೋಕಾರ್ಪಣೆ, ಶಿಷ್ಟಾಚಾರ ಉಲ್ಲಂಘನೆ ಎಂದ ಸಿಎಂಗೆ ಗಡ್ಕರಿ ಪ್ರತಿಕ್ರಿಯೆ

ತಂದೆಯಿಂದಲೇ ಹತ್ಯೆಯಾದ ಟೆನ್ನಿಸ್ ತಾರೆ ರಾಧಿಕಾ, ಇದೊಂದು ಮುಚ್ಚಿದ ಪ್ರಕರಣ ಎಂದಿದ್ಯಾಕೆ ಖಾಕಿ

ಮುಂದಿನ ಸುದ್ದಿ
Show comments