Webdunia - Bharat's app for daily news and videos

Install App

2000 ರೂಪಾಯಿ ಹೋಮ್ ಡೆಲಿವರಿ ಮಾಡಲಿದೆ ಸ್ನ್ಯಾಪ್‍ಡೀಲ್

Webdunia
ಗುರುವಾರ, 22 ಡಿಸೆಂಬರ್ 2016 (14:52 IST)
ಅಂತರ್ಜಾಲದಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಳ್ಳುವುದು ಈಗ ಸಾಮಾನ್ಯ. ಅದಕ್ಕೆ ಆನ್ಲೈನ್ ಪೇಮೆಂಟ್ ಮಾಡಬಹುದು ಅಥವಾ ಕ್ಯಾಶ್ ಆನ್ ಡೆಲಿವರಿ ಕೂಡ ಆಯ್ದುಕೊಳ್ಳಬಹುದು. 

 
ಆದರೆ ನೋಟು ನಿಷೇಧದ ಬಳಿಕ ಜನ ನಗದಿಗಾಗಿ ಬ್ಯಾಂಕ್, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಮತ್ತೆ ಕ್ಯಾಸ್ ಆನ್ ಡೆಲಿವರಿ ಪ್ರಶ್ನೆ ಎಲ್ಲಿಯದು?. ಮತ್ತೀಗ ಅಂತರ್ಜಾಲ ಮಾರುಕಟ್ಟೆ ತಾಣವಾದ ಸ್ನ್ಯಾಪ್‍ಡೀಲ್ ನಗದನ್ನೇ ಹೋಮ್ ಡೆಲಿವರಿ ಮಾಡಲು ಮುಂದಾಗಿದ್ದು Cash@Home ಸೇವೆಯನ್ನು ಪರಿಚಯಿಸುತ್ತಿದೆ. 
 
ಈ ಸೇವೆ ನೀಡಲು ಸ್ನ್ಯಾಪ್‍ಡೀಲ್ , ಇತರೆ ಗ್ರಾಹಕರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡು ನೀಡಿದ ಹಣವನ್ನು ಬಳಸಿಕೊಳ್ಳಲಿದೆ. ಕಂಪನಿಯ ಸಿಬ್ಬಂದಿತರುವ ಸ್ವೈಪಿಂಗ್ ಮಷೀನ್‍ನಲ್ಲಿ ತಮ್ಮ ಎಟಿಎಂ ಕಾರ್ಡನ್ನು ಸ್ವೈಪ್ ಮಾಡಬೇಕು. ಕಾರ್ಡಿನಿಂದ ಹಣ ಪಾವತಿಯಾದ ನಂತರ ಕೊರಿಯರ್ ವ್ಯಕ್ತಿ 2 ಸಾವಿರ ರೂ. ನಗದನ್ನು ಗ್ರಾಹಕರಿಗೆ ಹಸ್ತಾಂತರಿಸುತ್ತಾರೆ. ಸೇವೆಗೆ ಮನವಿ ಮಾಡಿದ ಒಂದು ದಿನದ ಬಳಿಕ ಹಣವನ್ನು ಡೆಲಿವರಿ ಮಾಡಲಾಗುವುದು. ಒಬ್ಬ ಗ್ರಾಹಕ ಒಮ್ಮೆ 2,000 ರೂಪಾಯಿಯನ್ನು ಮಾತ್ರ ಬುಕ್ ಮಾಡಬಹುದು. ಯಾವುದೇ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಬಹುದು. ಇದಕ್ಕಾಗಿ 1 ರೂಪಾಯಿ ಸೇವಾ ಶುಲ್ಕವನ್ನು ನೀಡಬೇಕು. ನಗದು ಬುಕಿಂಗ್ ಮಾಡುವ ವೇಳೆಯೇ ಡೆಬಿಟ್ ಕಾರ್ಡ್ ಅಥವಾ ಫ್ರೀಚಾರ್ಜ್ ಮುಖಾಂತರ ಸೇವಾ ಶುಲ್ಕವನ್ನು ಪಾವತಿಸಬೇಕು.
 
ಈಗಾಗಲೇ ಗುರ್ಗಾಂವ್ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಸೇವೆ ಪ್ರಾರಂಭವಾಗಿದ್ದು ಮುಂದಿನ ತಿಂಗಳಲ್ಲಿ ಇತರ ಪ್ರಮುಖ ನಗರಗಳಲ್ಲಿ ಸಹ ವಿಸ್ತರಿಸಲಾಗುವುದು. ಜನರ ಪ್ರತಿಕ್ರಿಯೆ ಮತ್ತು ಕರೆನ್ಸಿ ನೋಟುಗಳ ಲಭ್ಯತೆಯ ಆಧಾರದ ಮೇಲೆ ಹೆಚ್ಚಿನ ವಿವರಗಳನ್ನು ಅಪ್ಡೇಟ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments