Webdunia - Bharat's app for daily news and videos

Install App

ಎನ್‌ಡಿಎ ಸರ್ಕಾರ ತನ್ನ ಸಾಧನೆಗಳ ಬಗ್ಗೆ ಚೆನ್ನಾಗಿ ಪ್ರಚಾರ ಮಾಡಿದೆ: ಚಿದಂಬರಂ

Webdunia
ಸೋಮವಾರ, 25 ಮೇ 2015 (17:55 IST)
ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಒಂದು ವರ್ಷದ ಅಧಿಕಾರಾವಧಿ ಪೂರೈಸಿದ ಸಂದರ್ಭದಲ್ಲಿ  ತನ್ನ ಕಾರ್ಯಗಳನ್ನು ಚೆನ್ನಾಗಿ ಜಾಹೀರಾತು ಮಾಡಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
 
ಈ ಸರ್ಕಾರ ಮಾಡಿದ ಹಾಗೆ ನಮ್ಮ ಸಾಧನೆಗಳ ಬಗ್ಗೆ ನಾವು  ಡಂಗೂರ ಹೊಡೆಯಲಿಲ್ಲ. ಅವರು ತಮ್ಮ ಕೆಲಸಗಳಿಗೆ ಚೆನ್ನಾಗಿ ಪ್ರಚಾರ ಮಾಡಿದರು ಎಂದು ಕಳೆದ ಒಂದು ವರ್ಷದಲ್ಲಿ ಎನ್‌ಡಿಎ ಸರ್ಕಾರದ ಆರ್ಥಿಕ ಬೆಳವಣಿಗೆ ಚಿತ್ರಣವನ್ನು ಚರ್ಚಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 
 
ಕಳೆದ ಒಂದು ವರ್ಷದಲ್ಲಿ ಬೆಳವಣಿಗೆ ಗಮನಾರ್ಹವಾಗಿಲ್ಲ. ಸಾಲದ ಬೆಳವಣಿಗೆ ಕುಂಠಿತವಾಗಿದೆ. ಒಟ್ಟು ಬೇಡಿಕೆ ಕುಸಿದಿದೆ ಮತ್ತು ಪ್ರಮುಖ ವಲಯವು ಕಳಪೆ ಸಾಧನೆ ತೋರಿದೆ ಎಂದು ಚಿದಂಬರಂ ಹೇಳಿದರು. 
 
ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ.  161 ಸಾರ್ವಜನಿಕ ವಲಯದ ಯೋಜನೆಗಳು ಮತ್ತು 565 ಖಾಸಗಿ ಕ್ಷೇತ್ರದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. 
 
ಹಣದುಬ್ಬರದ ಕುಸಿತದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಚಿಲ್ಲರೆ ಹಣದುಬ್ಬರ ತಗ್ಗಿರುವುದು ನಿಜ. ಆದರೆ ಅವಶ್ಯಕ ಪದಾರ್ಥಗಳಾದ ಹಾಲು, ತರಕಾರಿಗಳು ಮತ್ತು ಬೇಳೆಕಾಳುಗಳ ದರವು ಜನಸಾಮಾನ್ಯರ ಕೌಟುಂಬಿಕ ಬಜೆಟ್ ಮೇಲೆ ಪರಿಣಾಮ ಬೀರಿದೆ ಎಂದು ಚಿದಂಬರಂ ಹೇಳಿದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments