ವಿಂಡೋಸ್ 7ಕ್ಕೆ ಮೈಕ್ರೋಸಾಫ್ಟ್ ಡೆಡ್‌ಲೈನ್

Webdunia
ಶುಕ್ರವಾರ, 20 ಜನವರಿ 2017 (13:05 IST)
ಕಂಪ್ಯೂಟರ್ ಬಳಕೆದಾರರಿಗೆ ಅತ್ಯಂತ ಚಿರಪರಿಚಿತ ಆಪರೇಟಿಂಗ್ ಸಿಸ್ಟಂ ವಿಂಡೋಸ್ 7. ಆ ಬಳಿಕ ಬಂದಂತಹ ವಿಂಡೋಸ್ 8.. ವಿಂಡೋಸ್ 10 ಆವೃತ್ತಿಗಳು ಬಂದರೂ ಈಗಲೂ ಬಹಳಷ್ಟು ಮಂದಿ ವಿಂಡೋಸ್ 7ನ್ನೇ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಅದರಲ್ಲಿರುವ ಸುಲಭವಾದ ಆಯ್ಕೆಗಳು.
 
ಅಷ್ಟೆಲ್ಲಾ ಜನಪ್ರಿಯವಾದ ಆಪರೇಟಿಂಗ್ ಸಿಸ್ಟಂ ಇನ್ನು ಮೂರು ವರ್ಷಗಳಲ್ಲಿ ಗುಡ್‌ಬೈ ಹೇಳಲಿದೆ. ಈ ಸಂಗತಿಯನ್ನು ಸ್ವತಃ ಮೈಕ್ರೋಸಾಫ್ಟ್ ಕಂಪೆನಿ ಪ್ರಕಟಿಸಿದೆ. ಭದ್ರತೆ ವಿಚಾರದಲ್ಲಿ ವಿಂಡೋಸ್ 7 ಅಪಾಯದಲ್ಲಿದೆಯಂತೆ. ಮೂರು ವರ್ಷಗಳಲ್ಲಿ ಸೆಕ್ಯುರಿಟಿ ಬೆಂಬಲ ನಿಲ್ಲಿಸುವುದಾಗಿ ಕಂಪೆನಿ ಹೇಳಿದೆ.
 
ದಿನದಿಂದ ದಿನಕ್ಕೆ ಮಾಲ್‌ವೇರ್‌ಗಳ ದಾಳಿ ಹೆಚ್ಚುತ್ತಿದೆ. ಅವನ್ನು ಎದುರಿಸಬೇಕಾದರೆ ಗ್ರಾಹಕರಿಗೆ ಯಾವಾಗಲೂ ಓಎಸ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಾ ಅಪ್‌ಡೇಟ್ ಕಳುಹಿಸಬೇಕಾಗಿರುತ್ತದೆ. ಅದೇ ರೀತಿ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಪ್ರಿಂಟರ್..ಕೀಬೋರ್ಡ್..ಸ್ಪೀಕರ್..ಮೌಸ್ ಇನ್ನಿತರೆ ಹಾರ್ಡ್‌ವೇರ್ ಪರಿಕರಗಳನ್ನು ಬೆಂಬಲಿಸಬೇಕಾದರೂ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. 
 
ಮುಖ್ಯವಾಗಿ ಹಾರ್ಡ್‍ವೇರ್ ತಯಾರಕರು ವಿಂಡೋಸ್ 7ಕ್ಕೆ ಸರಿಹೊಂದುವ ಡ್ರೈವರ್ ಸಾಫ್ಟ್‌ವೇರ್‌ಗಳನ್ನು ಕೊಡುತ್ತಿಲ್ಲ. ಹೊಸದಾಗಿ ಬಂದಿರುವ ವಿಂಡೋಸ್ 10ಕ್ಕೆ ಕೊಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವುದು ಮೈಕ್ರೋಸಾಫ್ಟ್ ಕಂಪೆನಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ವಿಂಡೋಸ್ 7ಕ್ಕೆ 2020 ಜನವರಿ 13ರಿಂದ ಸೆಕ್ಯುರಿಟಿ ಸಪೋರ್ಟ್ ಸಂಪೂರ್ಣವಾಗಿ ನಿಲ್ಲಿಸುತ್ತಿರುವುದಾಗಿ ಕಂಪೆನಿ ಹೇಳಿದೆ. ಅಷ್ಟರೊಳಗೆ ಬಳಕೆದಾರರು ವಿಂಡೋಸ್ 10ಕ್ಕೆ ಬದಲಾಗಬೇಕೆಂದು ಮೈಕ್ರೋಸಾಫ್ಟ್ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದ ಸೌಜನ್ಯಾ ಪ್ರಕರಣ: ಸಿಬಿಐ ತನಿಖಾ ವೈಖರಿಗೆ ಸುಪ್ರೀಂ ಕೆಂಡಾಮಂಡಲ, ಮರು ತನಿಖೆಗೆ ತಾತ್ವಿಕ ಒಪ್ಪಿಗೆ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ

ಶಾಲಾ ಬಸ್ ಮೇಲೆ ಬಿದ್ದ ಬೃಹತ್ ಮರ, ಯುಕೆಜಿ ಬಾಲಕಿ ಸಾವು, ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

NEET UG Paper Leak: ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಹೊಸ ಷರತ್ತುಗಳನ್ನು ಹಾಕಬಾರದು

ಜಂತರ್‌ ಮಂತರ್‌ನಲ್ಲಿ ಲಾಠಿಚಾರ್ಜ್‌ ವೇಳೆ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮುಟ್ಟಿಲಾಗಿದೆ: ಬಿಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments