Webdunia - Bharat's app for daily news and videos

Install App

ಸಿನಿ ಪ್ರಿಯರಿಗೆ ಜಿಯೋ ಆಫರ್: ಬೇಕಾದಷ್ಟು ಸಿನಿಮಾ ಡೌನ್‌ಲೋಡ್ ಮಾಡಿಕೊಳ್ಳಿ

Webdunia
ಸೋಮವಾರ, 13 ಫೆಬ್ರವರಿ 2017 (17:16 IST)
ಕೆಲ ತಿಂಗಳುಗಳ ಹಿಂದೆ ಉಚಿತ 4ಜಿ ಕೊಡುಗೆಯೊಂದಿಗೆ ರಿಲಯನ್ಸ್ ಜಿಯೋವನ್ನು ಪರಿಚಯಿಸುವ ಮೂಲಕ ರಿಲಯನ್ಸ್ ಕಮ್ಯುನಿಕೇಷನ್ ಭಾರತೀಯ ದೂರಸಂಪರ್ಕ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದು ಸುಳ್ಳಲ್ಲ. 3 ತಿಂಗಳ ವೆಲ ಕಮ್ ಆಫರ್ ಬಳಿಕ ಕಂಪನಿ ಡೈಲಿ ಡಾಟ್ ಬಳಕೆಯನ್ನು 4ಜಿಬಿಯಿಂದ 1 ಜಿಬಿಗೆ ಇಳಿಸಿತ್ತು ಮತ್ತು ಈ ಕೊಡುಗೆಯನ್ನು ಮಾರ್ಚ್ 31ರವರೆಗೆ ಮುಂದುವರೆಸುವುದಾಗಿ ಹೇಳಿದೆ.





















ಆದರೆ ತಮ್ಮ ನೆಚ್ಚಿನ ಸಿನಿಮಾ, ವಿಡಿಯೋಗಳನ್ನು ವೀಕ್ಷಿಸ ಬಯಸುವ  ಸಿನಿಮಾ ಪ್ರಿಯ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಹೊಸ ಕೊಡುಗೆಯನ್ನು ಹೊತ್ತುಕೊಂಡು ಬಂದಿದೆ.

ಈ ಹಿಂದೆ ಸಿನಿಮಾ ವೀಕ್ಷಣೆಗಾಗಿ ಜಿಯೋ ಸಿನಿಮಾ ಎಂಬ ಆಪ್‌ಅನ್ನು ಪರಿಚಯಿಸಿ ಬಾಲಿವುಡ್, ಹಾಲಿವುಡ್ ಸಿನಿಮಾಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತ್ತು.ಈಗ ಸಿನಿಮಾಗಳನ್ನು ನೋಡುವುದಷ್ಟೆ ಅಲ್ಲದೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಸಹ ಕಲ್ಪಿಸಿದೆ. ಅದು ಕೂಡ ಉಚಿತವಾಗಿ.
 
ಇದಕ್ಕಾಗಿ ಬಳಕೆದಾರರು ಜಿಯೋ ಸಿನಿಮಾ ಆಪ್‌ ಅನ್ನು ಆಪ್‌ಡೇಟ್ ಮಾಡಬೇಕಿದ್ದು, ಹೊಸ ಆಪ್‌ಡೇಟ್‌ನಲ್ಲಿ 'ಸ್ಮಾರ್ಟ್‌ ಡೌನ್‌ಲೋಡ್' ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ಡೌನ್‌ಲೋಡ್‌ ಅನ್ನು ನಸುಕಿನ ಜಾವ 2ಗಂಟೆಯಿಂದ 5ಗಂಟೆಯವರೆಗೆ ಶೆಡ್ಯೂಲ್ ಮಾಡಬಹುದಾಗಿದೆ. ಈ ಮೂರು ತಾಸುಗಳಲ್ಲಿ ಡಾಟಾ ಬಳಕೆಗೆ ಯಾವುದೇ ಮಿತಿ ಇರುವುದಿಲ್ಲ.
 
 
ಇದಷ್ಟೇ ಅಲ್ಲದೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ’6’ ಸೀರೀಸ್‌ನೊಂದಿಗೆ ಆರಂಭವಾಗುವ ಮೊಬೈಲ್ ನಂಬರ್‌ಗಳನ್ನು ಗ್ರಾಹಕರಿಗೆ ನೀಡಲಿದೆ. ಈ ಹಿನ್ನೆಲೆಯಲ್ಲಿ ದೂರಸಂಪರ್ಕ ಇಲಾಖೆ (ಡಾಟ್)ಯಿಂದ ಅನುಮತಿ ಪಡೆದಿದೆ ಎಂಬ ಸುದ್ದಿ ಇದೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

30 ವರ್ಷಗಳಲ್ಲೇ ಇದು ಭೀಕರ ದಾಳಿ: ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ 27ಕ್ಕೂ ಹೆಚ್ಚು ಪ್ರವಾಸಿಗರು ಸಾವು ಶಂಕೆ

Pehalgam terror attack: ಪ್ಯಾಂಟ್ ಹಿಡಿದೆಳೆದು ಹಿಂದೂ ಎಂದು ಕನ್ ಫರ್ಮ್ ಮಾಡಿ ಕೊಂದೇ ಬಿಟ್ಟ ಉಗ್ರರು

Pehalgam Terror Attack: ಸ್ಥಳಕ್ಕೆ ಅಮಿತ್ ಶಾ ಎಂಟ್ರಿ, ಉಗ್ರರನ್ನು ಸುಮ್ನೇ ಬಿಡಲ್ಲ ಎಂದ ಮೋದಿ

ಉಗ್ರರ ಪೈಶಾಚಿಕ ದಾಳಿಯಲ್ಲಿ ಸಿಲುಕಿದ ಶಿವಮೊಗ್ಗದ ಕುಟುಂಬ: ಕಾಶ್ಮೀರಕ್ಕೆ ರಾಜ್ಯದ ಅಧಿಕಾರಿಗಳ ದೌಡು

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

ಮುಂದಿನ ಸುದ್ದಿ
Show comments