Webdunia - Bharat's app for daily news and videos

Install App

ಐಡಿಯಾ-ವೊಡಾಫೋನ್ ವಿಲೀನಕ್ಕೆ ಚರ್ಚೆ

Webdunia
ಮಂಗಳವಾರ, 31 ಜನವರಿ 2017 (11:52 IST)
ಭಾರತ ದೂರಸಂಪರ್ಕ ದಿಗ್ಗಜ ಐಡಿಯಾದೊಂದಿಗೆ ವಿಲೀನಕ್ಕೆ ಚರ್ಚೆ ನಡೆಯುತ್ತಿದೆ ಎಂದು ವೊಡಾಫೋನ್ ಸೋಮವಾರ ತಿಳಿಸಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯನ್ನು ವಿಲೀನದಿಂದ ತಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಕಂಪೆನಿ ಅಭಿಪ್ರಾಯಪಟ್ಟಿದೆ.
 
ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಈ ಬಗ್ಗೆ ವೊಡಾಫೋನ್ ಪ್ರಕಟಿಸಿಕೊಂಡಿದೆ. ಐಡಿಯಾ ಮಾತೃಸಂಸ್ಥೆಯಾಗಿರುವ ಆದಿತ್ಯಬಿರ್ಲಾ ಗ್ರೂಪ್ ಜತೆಗೆ ಚರ್ಚೆ ನಡೆಸುತ್ತಿದ್ದೇವೆಂದಿದೆ. ವೊಡಾಫೋನ್ - ಐಡಿಯಾ ವಿಲೀನವಾದರೆ, ಗ್ರಾಹಕರ ಸಂಖ್ಯೆ 39 ಕೋಟಿಯಾಗಲಿದೆ. ಈಗಾಗಲೇ ಏರ್‍‍ಟೆಲ್ ಕಂಪನಿಗೆ 27 ಕೋಟಿ ಗ್ರಾಹಕರಿದ್ದು, ಐಡಿಯಾ ವೊಡಾಫೋನ್ ಜತೆಯಾದರೆ ಏರ್‍‍ಟೆಲ್ ಕಂಪನಿಯನ್ನು ಹಿಂದಿಕ್ಕಬಹುದಾಗಿದೆ.
 
ಕಳೆದ ಆರು ತಿಂಗಳಿನಿಂದ ಉಚಿತ ಸೌಲಭ್ಯಗಳನ್ನು ಒದಗಿಸಿ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ರಿಲಾಯನ್ಸ್ ಜಿಯೊಗೆ ಐಡಿಯಾ-ವೊಡಾಫೋನ್ ಮೈತ್ರಿ ಹೊಡೆತ ನೀಡಲಿದೆ. ಪ್ರಸ್ತುತ ಜಿಯೋಗೆ  7.2 ಕೋಟಿ ಗ್ರಾಹಕರಿದ್ದು, ದೇಶದಲ್ಲಿ ಅತೀ ಹೆಚ್ಚು ಗ್ರಾಹಕರಿರುವ ಏರ್‍‍ಟೆಲ್ ಕಂಪನಿಗೆ ಷೇರು ಮಾರುಕಟ್ಟೆಯಲ್ಲಿ ಶೇ.24 ಷೇರುಗಳಿವೆ.
 
ಶೇ.19 ಷೇರು ಹೊಂದಿರುವ ವೊಡಾಫೋನ್ ಮತ್ತು ಶೇ.17 ಷೇರು ಹೊಂದಿರುವ ಐಡಿಯಾ ವಿಲೀನವಾದರೆ, ಈ ಕಂಪನಿ ದೇಶದ ಅತೀ ದೊಡ್ಡ ಟೆಲಿಕಾಂ ಶಕ್ತಿಯಾಗಿ ಹೊರಹೊಮ್ಮಲಿದೆ. ಒಂದು ಕಡೆ ಜಿಯೋಗೆ ಮತ್ತೊಂದು ಕಡೆ ಏರ್ ಟೆಲ್ ಕಂಪೆನಿಗೂ ಇದರಿಂದ ಹೊಡೆತ ಬೀಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments