Webdunia - Bharat's app for daily news and videos

Install App

ಕೊನೆಗೂ ಲಾಂಚ್ ಆಯ್ತು ಉಚಿತ ರಿಲಯನ್ಸ್ ಜಿಯೋ ಫೋನ್.. ಏನೇನು ಇದೆ ಇದರಲ್ಲಿ?

Webdunia
ಶುಕ್ರವಾರ, 21 ಜುಲೈ 2017 (12:05 IST)
ಮುಂಬೈ: ನಿರೀಕ್ಷೆಯಂತೇ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದಾರೆ. ಅಂಬಾನಿ ಮಕ್ಕಳಾದ ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಜಿಯೋ ಫೋನ್ ಲೋಕಾರ್ಪಣೆ ಮಾಡಿದರು.


ಜಿಯೋ ಸಿಮ್ ಮೂಲಕ ಉಚಿತವಾಗಿ ಇಂಟರ್ನೆಟ್ ಒದಗಿಸಿದ್ದ ರಿಲಯನ್ಸ್ ಇದೀಗ ಜಿಯೋ ಫೋನ್ ನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಆದರೂ ಫೋನ್ ಖರೀದಿಸುವಾಗ 1500 ರೂ. ಡೆಪಾಸಿಟ್ ಪಾವತಿಸಬೇಕು. ಇದನ್ನು ಮೂರು ವರ್ಷಗಳ ನಂತರ ಸಂಪೂರ್ಣವಾಗಿ ಮರಳಿ ಪಡೆಯಬಹುದು. ಆಗಸ್ಟ್ 24 ರಿಂದ ಪ್ರಿ ಬುಕಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ ನಿಂದ ಸ್ಮಾರ್ಟ್ ಫೋನ್ ಲಭ್ಯವಾಗುವುದು ಎಂದು ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಈ ನೂತನ 4ಜಿ ಫೋನ್ ಗೆ ‘ರಿಲಯನ್ಸ್ ಜಿಯೋ ಫೋನ್’ ಎಂದೇ ಹೆಸರಿಡಲಾಗಿದೆ. ಈ ಫೋನ್ ಗಳಲ್ಲಿ ಉಚಿತ ಕರೆ, ಅನಿಯಮಿತ ಇಂಟರ್ ನೆಟ್ ಮತ್ತು ಎಸ್ ಎಂಎಸ್ ಸೌಲಭ್ಯವಿರಲಿದೆ. ಪ್ರತೀ ತಿಂಗಳು ಕೇವಲ 153 ರೂ. ಪಾವತಿಸಿದರೆ  ಈ ಫೋನ್ ನಲ್ಲಿ ಈ ಎಲ್ಲಾ ಸೌಲಭ್ಯಗಳು ಲಭ್ಯವಿರಲಿದೆ. ಅಲ್ಲದೆ ರಿಲಯನ್ಸ್ ಟಿವಿ-ಕ್ಯಾಬಲ್ ಬೇಕಾಗಿದ್ದರೆ ಪ್ರತೀ ತಿಂಗಳು 309 ರೂ. ಪಾವತಿಸಿದರೆ ಸಾಕು. ರಿಲಯನ್ಸ್ ಜಿಯೋ ಫೋನ್ ನಲ್ಲಿ ಧನ್ ಧನಾ ಧನ್ ಗ್ರಾಹಕರೂ ಮಾಸಿಕ 153 ರೂ. ಪಾವತಿಸಿದರೆ ಸಾಕು.

ಪ್ರಧಾನಿ ಮೋದಿಯವರ ಕನಸಿನ ಸರ್ಕಾರಿ ಆಪ್ ಗಳು, ಡಿಜಿಟಲ್ ಹಣ ಪಾವತಿ ಎಲ್ಲವೂ ಸಾಧ್ಯವಾಗುವಂತಹ ಫೀಚರ್ ಗಳು ಈ ಫೋನ್ ನಲ್ಲಿರಲಿವೆ. ಅಂಬಾನಿ ಕುಟುಂಬದ ಕುಡಿಗಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಈ ರಿಲಯನ್ಸ್ ಜಿಯೋ ಫೋನ್ ಯೋಜನೆಯ ನಿರ್ದೇಶಕರಾಗಿರುತ್ತಾರೆ ಎಂದು ಇದೇ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಇದನ್ನೂ ಓದಿ..  ಭಾರತ-ಚೀನಾ ವಿವಾದಕ್ಕೆ ತುಪ್ಪ ಸುರಿಯಲು ಯತ್ನಿಸುತ್ತಿರುವ ಪಾಕ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪದ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಚುನಾವಣಾ ಆಯೋಗ

ಧರ್ಮಸ್ಥಳ ಎಸ್ಐಟಿ ತನಿಖೆಯಲ್ಲಿ ಮಹತ್ವದ ನಿರ್ಧಾರ

ಧರ್ಮಸ್ಥಳ ವಿಚಾರದಲ್ಲಿ ಕ್ಷಮೆ ಕೇಳಿ ಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ದೇಶದಲ್ಲಿ ನಾನೇ ನಂ 1 ಗೃಹಸಚಿವ, ಹೇಳ್ಕೊಳ್ಳೋರು ಹೇಳ್ಕೊಳ್ಳಿ: ಡಾ ಜಿ ಪರಮೇಶ್ವರ್

ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಪೈಲೆಟ್‌ ಸಮಯ ಪ್ರಜ್ಞೆ ತಪ್ಪಿಸಿತು ದೊಡ್ಡ ದುರಂತ

ಮುಂದಿನ ಸುದ್ದಿ
Show comments