Webdunia - Bharat's app for daily news and videos

Install App

ವಜಾಗೊಂಡ 425 ನೌಕರರಿಗೆ ತಲಾ 1 ಲಕ್ಷ ಪರಿಹಾರಕ್ಕೆ ಕೋರ್ಟ್ ಆದೇಶ

Webdunia
ಶುಕ್ರವಾರ, 6 ಮಾರ್ಚ್ 2015 (12:58 IST)
ಗುರಗಾಂವ್ ಲೇಬರ್ ಕೋರ್ಟ್ ವಾಹನ ತಯಾರಿಕೆ ಸಂಸ್ಥೆ ಮಾರುತಿ ಸುಜುಕಿಗೆ 425 ನೌಕರರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.  2012ರ ಜುಲೈನಲ್ಲಿ ಕಂಪನಿಯ ಮನೆಸಾರ್ ಘಟಕದಲ್ಲಿ ಸಂಭವಿಸಿದ ಹಿಂಸಾಚಾರದ ನಂತರ ಅವರನ್ನು ವಜಾ ಮಾಡಲಾಗಿತ್ತು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮಾರ್ಚ್ 2ರಂದು ಈ ಆದೇಶ ನೀಡಿದ್ದು, ಮಾರುತಿ ಕಂಪನಿಗೆ ನೌಕರರಿಗೆ ಪರಿಹಾರ ಪಾವತಿ ಮಾಡಲು 4.25 ಕೋಟಿ ರೂ.ಗಳನ್ನು ಠೇವಣಿ ಇಡಬೇಕೆಂದು ಕೋರ್ಟ್ ಆದೇಶಿಸಿದೆ.ಆದೇಶದ ಪ್ರಕಾರ, ಪ್ರತಿಯೊಬ್ಬ ನೌಕರ 85,000 ರೂ.ಗಳನ್ನು ಪರಿಹಾರವಾಗಿ ಪಡೆಯುತ್ತಾರೆ ಮತ್ತು 15,000 ರೂ.ಗಳು ಕೋರ್ಟ್ ವೆಚ್ಚಕ್ಕೆ ಹೋಗುತ್ತದೆ.

ನೌಕರರ ಪರ ವಕೀಲ ರಾಜೇಂದ್ರ ಪಾಠಕ್ ಕಂಪನಿಯು ಕೇವಲ ಅನುಮಾನದ ಮೇಲೆ ನೌಕರರನ್ನು ವಜಾ ಮಾಡಿದೆ ಎಂದು ಆರೋಪಿಸಿದ್ದರು. ಪರಿಹಾರ ಕೊಟ್ಟಿದ್ದು ಒಳ್ಳೆಯದೇ. ಆದರೆ ವಜಾಗೊಂಡ ನೌಕರರಿಗೆ ಉದ್ಯೋಗ ಬೇಕಾಗಿದ್ದು ಕಂಪನಿ ಅವರನ್ನು ಮರುನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments