Webdunia - Bharat's app for daily news and videos

Install App

ಚಿನ್ನಾಭರಣ ಮೇಲಿನ ಅಬಕಾರಿ ತೆರಿಗೆ: 14ನೇ ದಿನಕ್ಕೆ ಕಾಲಿಟ್ಟ ವರ್ತಕರ ಪ್ರತಿಭಟನೆ

Webdunia
ಗುರುವಾರ, 17 ಮಾರ್ಚ್ 2016 (19:15 IST)
ನವದೆಹಲಿ: ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ಹೇರಿರುವುದನ್ನು ಹಿಂತೆಗೆಯುವಂತೆ ನೀಡಿದ ಪ್ರಸ್ತಾವಣೆಯನ್ನು ಅರುಣ ಜೇಟ್ಲಿ ತೀರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರು ನಡೆಸುತ್ತಿರುವ ಮುಷ್ಕರ ಹದಿನಾಲ್ಕನೆ ದಿನಕ್ಕೆ ಪ್ರವೇಶಿಸಿದೆ.
ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಅಬಕಾರಿ ಸುಂಕ ಹೇರಿರುವುದು ಮತ್ತು ಎರಡು ಲಕ್ಷ ರೂಪಾಯಿ ಮೀರಿದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪಾನ್‌ ಕಾರ್ಡನ್ನು ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ವಿರೋಧಿಸಿ ಚಿನ್ನಾಭರಣ ವರ್ತಕರು ದೇಶಾದ್ಯಂತ ಬಂದ್‌ ಮುಷ್ಕರ ನಡೆಸುತ್ತಿದ್ದಾರೆ.
 
ಬೆಳ್ಳಿಯೇತರ ಒಡವೆ ವಸ್ತುಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ಹೇರಿರುವುದನ್ನು ಹಿಂತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಪ್ರಸ್ತಾವಣೆಯನ್ನು ಸೋಮವಾರ ಲೋಕಸಭೆಯಲ್ಲಿ ಅರುಣ ಜೇಟ್ಲಿ ತಿರಸ್ಕರಿಸಿದ್ದರು.  
 
ಎರಡು ಲಕ್ಷ ರೂಪಾಯಿ ಮೀರಿದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪಾನ್‌ ಕಾರ್ಡನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಕ್ರಮದಿಂದ, ಚಿನ್ನಾಭರಣ ಉದ್ಯಮ ಗಣನೀಯವಾಗಿ 20 ಪ್ರತಿಶತದಷ್ಟು ಕುಸಿತ ಕಂಡಿದೆ ಎಂದು ಆಲ್ ಇಂಡಿಯಾ ಸರಫ್ ಅಸೋಸಿಯೇಷನ್ ಉಪಾಧ್ಯಕ್ಷ ಸುರೇಂದರ್ ಕುಮಾರ್ ಜೈನ್ ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments